ADVERTISEMENT

ಸುತ್ತೂರು ಶಾಖಾ ಮಠದ ಸ್ವಾಮೀಜಿ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 13:00 IST
Last Updated 7 ಮಾರ್ಚ್ 2020, 13:00 IST
ಮಹಾದೇವ ಸ್ವಾಮೀಜಿ
ಮಹಾದೇವ ಸ್ವಾಮೀಜಿ   

ತಿ.ನರಸೀಪುರ: ತಾಲ್ಲೂಕಿನ ಬೆನಕನಹಳ್ಳಿಯ ಪಟ್ಟದ ಮಠದ ಸ್ವಾಮೀಜಿ, ಪಾರ್ಶ್ವವಾಯು ನೋವಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾದೇವ ಸ್ವಾಮೀಜಿ (49) ನೇಣಿಗೆ ಶರಣಾದವರು.

27 ವರ್ಷಗಳಿಂದ ಸುತ್ತೂರು ಮಠದ ಶಾಖಾ ಮಠವಾಗಿದ್ದ ಬೆನಕನಹಳ್ಳಿ ಪಟ್ಟದ ಮಠದಲ್ಲಿ ಮಹಾದೇವ ಸ್ವಾಮೀಜಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 6–7 ವರ್ಷಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದರು. ಪಾರ್ಶ್ವವಾಯು ಸಮಸ್ಯೆಯೂ ಇತ್ತು. ಸಂಪೂರ್ಣವಾಗಿ ಗುಣಮುಖವಾಗದ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ತಾವು ಧರಿಸುತ್ತಿದ್ದ ವಸ್ತ್ರದಿಂದಲೇ ಮಠದ ಮೆಟ್ಟಿಲುಗಳ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಗ್ರಾಮದ ಮುಖಂಡರು ನೀಡಿದ ದೂರಿನನ್ವಯ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮೃತ ಸ್ವಾಮೀಜಿಯ ಪಾರ್ಥಿವ ಶರೀರವನ್ನು ಗ್ರಾಮದ ಬೀದಿಗಳಲ್ಲಿ ಹೂವಿನ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಸುತ್ತೂರು ಶ್ರೀಗಳು ಸೇರಿದಂತೆ ವಾಟಾಳು, ಕನಕಪುರ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವಿವಿಧ ಮಠಗಳ ಶ್ರೀಗಳು ಅಂತಿಮ ದರ್ಶನ ಪಡೆದರು. ಮಠದ ಆವರಣದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.