ADVERTISEMENT

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 17:26 IST
Last Updated 17 ಅಕ್ಟೋಬರ್ 2019, 17:26 IST
   

ತಲಕಾವೇರಿ: ಜೀವನದಿ ಕಾವೇರಿಯ ಉಗಮ ಸ್ಥಳವು ವಾರ್ಷಿಕ ತೀರ್ಥೋದ್ಭವಕ್ಕೆ ಸಜ್ಜಾಗಿದೆ.

ಇಂದು ತಡರಾತ್ರಿ 12.59ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಕಾವೇರಿಯು ಭಕ್ತರಿಗೆ ತೀರ್ಥ ರೂಪಿಣಿಯಾಗಿ ಕಾಣಿಸಿಕೊಳ್ಳುವಳು. ರಾತ್ರಿ ಹತ್ತರಿಂದ ಕ್ಷೇತ್ರದಲ್ಲಿ ಮಂತ್ರ ಘೋಷಗಳು ಆರಂಭವಾಗಲಿವೆ. ಕ್ಷೇತ್ರದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ಯ ನೇತೃತ್ವದಲ್ಲಿ ‌ಪೂಜೆಗಳು ನಡೆಯಲಿವೆ.

ಕಾವೇರಿ ಮಾತೆಯು ಚಿನ್ನಾಭರಣ ತೊಟ್ಟು ಕಂಗೊಳಿಸುತ್ತಿದ್ದಾಳೆ. ಭಾಗಮಂಡಲದಲ್ಲಿ ಪಿಂಡ‌ ಪ್ರದಾನ ಮಾಡಿದ ಭಕ್ತರು ತಲಕಾವೇರಿ ಕ್ಷೇತ್ರದತ್ತ ಬರಲು ಆರಂಭಿಸಿದ್ದಾರೆ. ಸಂಜೆಯಿಂದಲೂ ಮಳೆಯಾಗುತ್ತಿದ್ದು ಸಂಭ್ರಮಕ್ಕೆ ಅಡ್ಡಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.