ADVERTISEMENT

ಸರ್ವಪಕ್ಷ ನಿಯೋಗದಲ್ಲಿ ತೇಜಸ್ವಿ ಸೂರ್ಯ, ಬ್ರಿಜೇಶ್ ಚೌಟಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಮೇ 2025, 15:51 IST
Last Updated 18 ಮೇ 2025, 15:51 IST
 ತೇಜಸ್ವಿ ಸೂರ್ಯ 
 ತೇಜಸ್ವಿ ಸೂರ್ಯ    

ಬೆಂಗಳೂರು: ಪಾಕಿಸ್ತಾನದ ಭಯೋತ್ಪಾದನೆ ಚಟುವಟಿಕೆ ಮತ್ತು ಆಪರೇಷನ್ ಸಿಂಧೂರ ಕುರಿತು ವಿವಿಧ ರಾಷ್ಟ್ರಗಳಿಗೆ ಮಾಹಿತಿ ನೀಡಲು ತೆರಳಲಿರುವ ಉನ್ನತ ಮಟ್ಟದ ನಿಯೋಗದಲ್ಲಿ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಮತ್ತು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದ್ದಾರೆ.

ಕೇಂದ್ರ ಸರ್ಕಾರ 32 ದೇಶಗಳು ಮತ್ತು ಯುರೋಪಿಯನ್‌ ಒಕ್ಕೂಟಕ್ಕೆ ಭೇಟಿ ನೀಡಲು ಸರ್ವಪಕ್ಷಗಳ ಏಳು ನಿಯೋಗಳನ್ನು ರಚಿಸಿದೆ. ಈ ಭೇಟಿಯು ರಾಜತಾಂತ್ರಿಕ ಪ್ರಯತ್ನದ ಭಾಗವಾಗಿದೆ. ಪ್ರತಿ ತಂಡವು ರಾಜತಾಂತ್ರಿಕರನ್ನು ಒಳಗೊಂಡಿದೆ. ಈ ನಿಯೋಗಗಳು ಭಯೋತ್ಪಾದನೆ ಕುರಿತು ಭಾರತದ ದೃಢ ಮತ್ತು ಏಕೀಕೃತ ನಿಲುವನ್ನು ವಿವರಿಸುವ ಮತ್ತು ಗಡಿಯಾಚೆಗಿನ ದಾಳಿಗಳಿಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಪುನರುಚ್ಚರಿಸುವ ಗುರಿಯನ್ನು ಹೊಂದಿದೆ.

ತೇಜಸ್ವಿ ಸೂರ್ಯ ಅವರು ಶಶಿತರೂರ್ ಅವರ ತಂಡದಲ್ಲಿ (ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕ) ಮತ್ತು ಬ್ರಿಜೇಶ್ ಚೌಟ ಅವರು ಕನಿಮೋಳಿ ಅವರ ತಂಡದ (ರಷ್ಯಾ, ಗ್ರೀಸ್, ಸ್ಪೇನ್) ಸದಸ್ಯರಾಗಿದ್ದಾರೆ.

ADVERTISEMENT

ಬ್ರಿಜೇಶ್ ಚೌಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.