ಬೆಂಗಳೂರು:ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದ ಸಾಹಿತ್ಯಕ್ಕೆ ನೀಡುವ 2019ನೇ ಸಾಲಿನ ಪ್ರಶಸ್ತಿಗೆ ವಿಠಲರಾವ್ ಟಿ. ಗಾಯಕ್ವಾಡ್ ಅವರು ಅನುವಾದಿಸಿರುವ ‘ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ’ ಕೃತಿ ಆಯ್ಕೆಯಾಗಿದೆ.
ಮರಾಠಿ ಲೇಖಕ ಶರಣ ಕುಮಾರ್ ಲಿಂಬಾಳೆ ಅವರು ಈ ಕೃತಿಯನ್ನು ವಿಠಲರಾವ್ ಕನ್ನಡಕ್ಕೆ ತಂದಿದ್ದಾರೆ. ಡಾ.ಆರ್. ಪೂರ್ಣಿಮಾ, ಎಸ್. ದಿವಾಕರ್ ಮತ್ತು ಡಾ. ಅರವಿಂದ ಮಾಲಗತ್ತಿಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದ ಕೃತಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು. ಪ್ರಶಸ್ತಿ ₹ 50ಸಾವಿರ ನಗದು ಹಾಗೂ ತಾಮ್ರಪತ್ರ ಒಳಗೊಂಡಿದೆ. ವಿವಿಧ ಭಾಷೆಗಳಲ್ಲಿ ಆಯ್ಕೆಯಾದವರಿಗೆ ಮುಂದಿನ ದಿನಗಳಲ್ಲಿ ಸಮಾರಂಭ ಏರ್ಪಡಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯಕಾರ್ಯದರ್ಶಿಕೆ. ಶ್ರೀನಿವಾಸರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.