ADVERTISEMENT

ಹುಬ್ಬಳ್ಳಿ: ರಾಷ್ಟ್ರಪತಿ ಸ್ವಾಗತಿಸಲು ಸಜ್ಜಾದ ಬುಡಕಟ್ಟು ಜನಾಂಗದ ಮುಖಂಡರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 6:32 IST
Last Updated 26 ಸೆಪ್ಟೆಂಬರ್ 2022, 6:32 IST
ಬುಡಕಟ್ಟು ಮುಖಂಡರು
ಬುಡಕಟ್ಟು ಮುಖಂಡರು   

ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಲು ಉತ್ತರ ಕರ್ನಾಟಕದ ವಿವಿಧ ಬುಡಕಟ್ಟು ಜನಾಂಗದವರು ಸಜ್ಜಾಗಿದ್ದಾರೆ.

ರಾಷ್ಟ್ರಪತಿ ಅವರಿಗೆ ಪೌರ ಸನ್ಮಾನ ನಡೆಯಲಿರುವನಗರದ ಜಿಮ್ಖಾನಾ ಮೈದಾನದಲ್ಲಿ ಕಾದು ಕುಳಿತಿದ್ದಾರೆ.

ಧಾರವಾಡ ಜಿಲ್ಲೆಯ ಅಳ್ನವಾರ ತಾಲ್ಲೂಕಿನ ಗವಳಿವಾಡಿಯ ಗಣಗರಗೌಳಿ ಜನಾಂಗದವರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಸಿದ್ದಿ ಜನಾಂಗದವರು ಬಂದಿದ್ದಾರೆ.

ADVERTISEMENT

'ರಾಷ್ಟ್ರಪತಿ ಅವರು ಬುಡಕಟ್ಟು ಜನಾಂಗದವರು ಎನ್ನುವುದು ಹೆಮ್ಮೆಯ ಸಂಗತಿ. ಅವರಿಗೆ ನಮ್ಮ ಸಂಪ್ರದಾಯ ತೋರಿಸಬೇಕೆಂದು ಬಂದಿದ್ದೇವೆ' ಎಂದು ಗವಳಿ ಸಮುದಾಯದ ಮಹಿಳೆಯೊಬ್ವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.