ADVERTISEMENT

ಡಾ.ಬಸವರಾಜ ಕಲ್ಗುಡಿಗೆ ‘ವರ್ಧಮಾನ ಪ್ರಶಸ್ತಿ’

ಡಾ.ದೀಪಾ ಫಡ್ಕೆಗೆ ‘ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 19:45 IST
Last Updated 6 ಜುಲೈ 2019, 19:45 IST
ಡಾ.ಬಸವರಾಜ ಕಲ್ಗುಡಿ ಹಾಗೂ ಡಾ.ದೀಪಾ ಫಡ್ಕೆ
ಡಾ.ಬಸವರಾಜ ಕಲ್ಗುಡಿ ಹಾಗೂ ಡಾ.ದೀಪಾ ಫಡ್ಕೆ   

ಮೂಡುಬಿದಿರೆ: ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ 2019ನೇ ಸಾಲಿನ ಪ್ರತಿಷ್ಠಿತ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ ಡಾ.ಬಸವರಾಜ ಕಲ್ಗುಡಿ ಅವರನ್ನು, ‘ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ಡಾ.ದೀಪಾ ಫಡ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ತಿಳಿಸಿದ್ದಾರೆ.

ವರ್ಧಮಾನ ಪ್ರಶಸ್ತಿ ₹ 25 ಸಾವಿರ ನಗದು ಗೌರವ, ತಾಮ್ರಪತ್ರ ಸಮ್ಮಾನ, ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ₹ 15 ಸಾವಿರ ನಗದು ಗೌರವ, ತಾಮ್ರಪತ್ರ ಸಮ್ಮಾನವನ್ನು ಒಳಗೊಂಡಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT