ADVERTISEMENT

ಬೆಂಗಳೂರು: ಬಿಎಚ್‌ಇಎಲ್‌ಗೆ ಉಪರಾಷ್ಟ್ರಪತಿ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:15 IST
Last Updated 11 ಜನವರಿ 2025, 14:15 IST
ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಿಎಚ್‌ಇಎಲ್‌ನ ಘಟಕವೊಂದರ ಕಾರ್ಯವೈಖರಿಯನ್ನು ತಂತ್ರಜ್ಞರು ವಿವರಿಸಿದರು
ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಿಎಚ್‌ಇಎಲ್‌ನ ಘಟಕವೊಂದರ ಕಾರ್ಯವೈಖರಿಯನ್ನು ತಂತ್ರಜ್ಞರು ವಿವರಿಸಿದರು   

ಬೆಂಗಳೂರು: ನಗರದ ಬಿಎಚ್‌ಇಎಲ್‌ ಘಟಕಕ್ಕೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಮತ್ತು ಅವರ ಪತ್ನಿ ಸುದೇಶ್ ಧನಕರ್ ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಶನಿವಾರ ಭೇಟಿ ನೀಡಿ, ಕಾರ್ಮಿಕರ ಜತೆ ಮಾತುಕತೆ ನಡೆಸಿದರು.

ಬಿಎಚ್‌ಇಎಲ್‌ನ ಕಾರ್ಯವೈಖರಿ ಮತ್ತು ಸ್ಥಿತಿಗತಿ ಕುರಿತು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಧನಕರ್ ಅವರಿಗೆ ಮಾಹಿತಿ ನೀಡಿದರು.

ಈ ವೇಳೆ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ‘ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ–2047 ಗುರಿಯ ಸಾಕಾರಕ್ಕಾಗಿ ಬಿಎಚ್‌ಇಎಲ್‌ ಕಾರ್ಯನಿರ್ವಹಿಸುತ್ತಿದೆ’ ಎಂದರು.

ADVERTISEMENT

‘ಹಿಂದಿನ ಆರ್ಥಿಕ ವರ್ಷದಲ್ಲಿ ಬಿಎಚ್‌ಇಎಲ್‌ ಒಟ್ಟು ₹69,000 ಕೋಟಿಯಷ್ಟು ಕಾರ್ಯಾದೇಶ ಪಡೆದುಕೊಂಡಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾರ್ಯಾದೇಶಗಳ ಒಟ್ಟು ಮೊತ್ತ ₹1.70 ಲಕ್ಷ ಕೋಟಿ ದಾಟಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.