ADVERTISEMENT

ಗುಂಪು ಘರ್ಷಣೆ: ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 18:56 IST
Last Updated 1 ಜೂನ್ 2019, 18:56 IST

ವಾಡಿ (ಕಲಬುರ್ಗಿ ಜಿಲ್ಲೆ): ಸಮೀಪದ ರಾವೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಿದ್ದಲಿಂಗ ಹಳ್ಳಿ ಎಂಬುವವರ ಮದುವೆ ಮೆರವಣಿಗೆಯ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ, ಕಲ್ಲು ತೂರಾಟ ನಡೆದು ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

‘ಜೋರಾದ ಸದ್ದಿನೊಂದಿಗೆ ಸಾಗಿದ ಮದುವೆ ಮೆರವಣಿಗೆಯು ಗ್ರಾಮದ ಮಸೀದಿ ಹತ್ತಿರ ಬಂದಿದೆ. ನಮಾಜ್ ನಡೆಯುತ್ತಿದೆ, ಸ್ವಲ್ಪ ದೂರ ಹೋಗಿ ಮೆರವಣಿಗೆ ನಡೆಸಿ ಎಂದು ಮುಸ್ಲಿಮರು ಮನವಿ ಮಾಡಿದರು. ಆಗ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ನಂತರ ಕಲ್ಲು ತೂರಾಟ ನಡೆಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ವಾಡಿ ಠಾಣೆಯಲ್ಲಿ ದೂರು– ಪ್ರತಿ ದೂರು ದಾಖಲಾಗಿವೆ. ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.