ADVERTISEMENT

‘ಹಣಕ್ಕಾಗಿ ಮತ ಮಾರಿಕೊಳ್ಳದಿರಿ’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:01 IST
Last Updated 1 ಏಪ್ರಿಲ್ 2019, 20:01 IST
ಸೋನು ಪಾಟೀಲ
ಸೋನು ಪಾಟೀಲ   

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಒಡ್ಡುವಆಸೆ, ಆಮಿಷಗಳಿಗೆ ಮರುಳಾಗದೆ, ಪ್ರಾಮಾಣಿಕವಾಗಿ ಮತದಾನಕ್ಕೆ ಮುಂದಾಗಿ. ನಿಮ್ಮ ಅಮೂಲ್ಯ ಮತವನ್ನು ಹಣಕ್ಕಾಗಿ ಮಾರಿಕೊಳ್ಳದಿರಿ. ದೇಶವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯುವ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿಯನ್ನೇ ಆಯ್ಕೆ ಮಾಡಿ.

ಇದು, ನಮ್ಮ ನಾಯಕನನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಸುಸಂದರ್ಭ. ಬೇಜವಾಬ್ದಾರಿತನ ತೋರದೆ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಜನಾನುರಾಗಿ ಜನಪ್ರತಿನಿಧಿಗಳು ಹಾಗೂ ಉತ್ತಮ ಸರ್ಕಾರದ ಆಯ್ಕೆಗೆ ಮತದಾನ ಒಳ್ಳೆಯ ಅಸ್ತ್ರ. ಇದನ್ನು ಮತದಾರರು ಚುನಾವಣೆಯಲ್ಲಿ ವಿವೇಚನೆಯಿಂದ ಬಳಸಬೇಕು.

–ಸೋನು ಪಾಟೀಲ, ನಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.