ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ ವಿದ್ಯಾರಣ್ಯಪುರದ ಆಶ್ರಮದ ಬಳಿ ತಂಗಾನದಿಗೆ ಸ್ನಾನಕ್ಕೆ ತೆರಳಿದ್ದ ನಾಲ್ವರು ನೀರು ಪಾಲಾಗಿದ್ದಾರೆ.
ಶೃಂಗೇರಿಯ ಕಾರು ಗ್ಯಾರೇಜ್ನ ರಾಮಚಂದ್ರಪ್ಪ, ಅವರ ಸಂಬಂಧಿಕರಾದ ಕೊಪ್ಪದ ತಾಲ್ಲೂಕಿ ಬೆಳವಿನಕೂಡಿಗೆಯ ರತ್ನಾಕರ, ನಾಗೇಂದ್ರ, ಪ್ರದೀಪ ನದಿಪಾಲಾಗಿದ್ದಾರೆ.
ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಒಬ್ಬನನ್ನು ರಕ್ಷಿಸಲು ಮುಂದಾಗಿ ಇತರ ಮೂವರು ನೀರು ಪಾಲಾಗಿದ್ದಾರೆ.
ಶೃಂಗೇರಿ ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈವರೆಗೆ ಒಂದು ಮೃತ ದೇಹವನ್ನು ಹೊರ ತೆಗೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.