ADVERTISEMENT

ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿ: ವಿಧವೆಯರಿಂದ ಗೃಹ ಪ್ರವೇಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 15:33 IST
Last Updated 19 ಅಕ್ಟೋಬರ್ 2018, 15:33 IST
ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿಯಲ್ಲಿ ಮಹಾನ್‌ ಪುರುಷರ ಭಾವಚಿತ್ರಗಳನ್ನು ಹಿಡಿದು ಗೃಹ ಪ್ರವೇಶಿಸಿದ ವಿಧವೆಯರು. ಶಾಸಕ ಸತೀಶ ಜಾರಕಿಹೊಳಿ ಅವರ ಜೊತೆಗಿದ್ದಾರೆ
ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿಯಲ್ಲಿ ಮಹಾನ್‌ ಪುರುಷರ ಭಾವಚಿತ್ರಗಳನ್ನು ಹಿಡಿದು ಗೃಹ ಪ್ರವೇಶಿಸಿದ ವಿಧವೆಯರು. ಶಾಸಕ ಸತೀಶ ಜಾರಕಿಹೊಳಿ ಅವರ ಜೊತೆಗಿದ್ದಾರೆ   

ರಾಯಬಾಗ: ಮುತ್ತೈದೆಯರಿಂದ ಶುಭ ಕಾರ್ಯ ಮಾಡಿಸುವುದು ಸಾಮಾನ್ಯ. ಆದರೆ, ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿಯಲ್ಲಿ ಸಾಮಾಜಿಕ ಹೋರಾಟಗಾರ ರಾಜು ಮರಿನಾಯಿಕ ತಮ್ಮ ಮನೆಯ ಗೃಹ ಪ್ರವೇಶವನ್ನು 5 ಜನ ವಿಧವೆಯರಿಂದ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಿಧವೆಯರು ಮಹಾನ್‌ ಪುರುಷರಾದ ಗೌತಮ ಬುದ್ಧ, ಬಸವಣ್ಣ, ಡಾ.ಬಿ.ಆರ್‌. ಅಂಬೇಡ್ಕರ್‌, ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳೊಂದಿಗೆ ಹೊಸ ಮನೆಯನ್ನು ಪ್ರವೇಶಿಸಿದರು. ಈ ಮೂಲಕ ಗೃಹ ಪ್ರವೇಶ ಶಾಸ್ತ್ರವನ್ನು ಪೂರೈಸಿದರು. ಈ ಕಾರ್ಯಕ್ರಮಕ್ಕೆ ಶಾಸಕ ಸತೀಶ ಜಾರಕಿಹೊಳಿ ಹಾಗೂ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT