ರಾಯಬಾಗ: ಮುತ್ತೈದೆಯರಿಂದ ಶುಭ ಕಾರ್ಯ ಮಾಡಿಸುವುದು ಸಾಮಾನ್ಯ. ಆದರೆ, ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿಯಲ್ಲಿ ಸಾಮಾಜಿಕ ಹೋರಾಟಗಾರ ರಾಜು ಮರಿನಾಯಿಕ ತಮ್ಮ ಮನೆಯ ಗೃಹ ಪ್ರವೇಶವನ್ನು 5 ಜನ ವಿಧವೆಯರಿಂದ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ವಿಧವೆಯರು ಮಹಾನ್ ಪುರುಷರಾದ ಗೌತಮ ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳೊಂದಿಗೆ ಹೊಸ ಮನೆಯನ್ನು ಪ್ರವೇಶಿಸಿದರು. ಈ ಮೂಲಕ ಗೃಹ ಪ್ರವೇಶ ಶಾಸ್ತ್ರವನ್ನು ಪೂರೈಸಿದರು. ಈ ಕಾರ್ಯಕ್ರಮಕ್ಕೆ ಶಾಸಕ ಸತೀಶ ಜಾರಕಿಹೊಳಿ ಹಾಗೂ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.