ADVERTISEMENT

ಮೋದಿ ಆಗಮನ: ಯಾದಗಿರಿಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 6:03 IST
Last Updated 19 ಜನವರಿ 2023, 6:03 IST
   

ಯಾದಗಿರಿ: ಪ್ರಧಾನಿ ಮೋದಿಯವರು ವಿವಿಧ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ನಗರದಾದ್ಯಂತ ಕಟ್ಟುನಿಟ್ಟಿನ ಭದ್ರತೆಯನ್ನು ಮಾಡಲಾಗಿದೆ.

ಪ್ರವೇಶ ದ್ವಾರಗಳಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.‌ ಪ್ರತಿಯೊಬ್ಬರನ್ನು ಏಳೆಂಟು ಜನ ಪೊಲೀಸರು ಭದ್ರತಾ ತಪಾಸಣೆ ಕೈಗೊಂಡು ಒಳಗೆ ಬಿಡುತ್ತಿದ್ದಾರೆ. ಕಪ್ಪು ಕೈವಸ್ತ್ರ, ಕಪ್ಪು ವೇಲ್, ಕಪ್ಪು ಬಟ್ಟೆಗಳನ್ನು ಧರಿಸಿದವರನ್ನು ವಾಪಸ್ ಕಳಿಸುತ್ತಿದ್ದಾರೆ.

ಕಪ್ಪು ಬಟ್ಟೆಗಳನ್ನು ಇಡಲು ಪ್ರತ್ಯೇಕ ಮಳಿಗೆ ಮಾಡಲಾಗಿದೆ.

ADVERTISEMENT

ಹಲವರು ಊಟ ಸೇವಿಸಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಎಲ್ಲಿ ನೋಡಿದರೂ ಜನ ಜನಜಂಗುಳಿ ಕಂಡುಬರುತ್ತಿದೆ. ಕಾರ್ಯಕ್ರಮದ ಹೊರ ಭಾಗದಲ್ಲಿ ಪೇರಲ, ಕಲ್ಲಂಗಡಿ, ಅನಾನಸ್ ವ್ಯಾಪಾರ ಭರ್ಜರಿ ನಡೆದಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.