ADVERTISEMENT

ಹನುಮಂತರಾಯಪ್ಪರಿಗೆ ‘ಯಕ್ಷಸಿರಿ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 20:04 IST
Last Updated 21 ಡಿಸೆಂಬರ್ 2020, 20:04 IST
ಹನುಮಂತ ರಾಯಪ್ಪ
ಹನುಮಂತ ರಾಯಪ್ಪ   

ಶಿರಾ: ಕರಿರಾಮನಹಳ್ಳಿ ಗ್ರಾಮದ ಮೂಡಲಪಾಯ ಯಕ್ಷಗಾನ ಭಾಗವತ ಹನುಮಂತ ರಾಯಪ್ಪ ಅವರಿಗೆ 2020ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಯಕ್ಷಸಿರಿ’ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ಮೂಡಲಪಾಯ ಯಕ್ಷಗಾನ ಕಲೆಯ ಪುನರುಜ್ಜೀವನಕ್ಕಾಗಿ ತಮ್ಮ ಜೀವನ ಅರ್ಪಿಸಿಕೊಂಡಿರುವ 96 ವರ್ಷದ ಇವರು ಬಾಲ್ಯದಲ್ಲಿಯೇ ಕೂಲಿ ಮಠದಲ್ಲಿ ಅಮರಕೋಶ, ರಾಮಾಯಣ, ಮಹಾಭಾರತವನ್ನು ಕಲಿತರು. 6 ತಿಂಗಳ ಕಾಲ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಶಿಕ್ಷಕ ವೃತ್ತಿಗೆ ವಿದಾಯ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT