ADVERTISEMENT

ಜೂ.4ರಿಂದ ಯೋಗ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಮೇ 2022, 20:25 IST
Last Updated 31 ಮೇ 2022, 20:25 IST

ಬೆಂಗಳೂರು: ಸ್ವಾಮಿ ವಿವೇಕಾನಂದ ಯೋಗ ರಿಸರ್ಚ್ ಆ್ಯಂಡ್ ಹೋಲಿಸ್ಟಿಕ್ ಹೆಲ್ತ್ ಟ್ರಸ್ಟ್ ಜೂನ್ 4ರಿಂದ 12ರವರೆಗೆ ಅಲ್ಲಾಳಸಂದ್ರದಲ್ಲಿರುವ ತನ್ನ ಕೇಂದ್ರದಲ್ಲಿ ಉಚಿತ ‘ಆತ್ಮದರ್ಶನ ಯೋಗ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಪ್ರತಿ ದಿನ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಹಾಗೂ ಭಾನುವಾರ ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಈ ಶಿಬಿರ ನಡೆಯಲಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನು–ಮಂಡಿ ನೋವು ಸೇರಿದಂತೆ ಜೀವನಶೈಲಿ ಆಧಾರಿತ ವಿವಿಧ ಸಮಸ್ಯೆ ಎದುರಿಸುತ್ತಿರುವವರು, ಆತ್ಮಹತ್ಯೆಗೆ ಯತ್ನಿಸಿ
ದವರು, ಮಾನಸಿಕ ಒತ್ತಡಕ್ಕೆ ಒಳಗಾ
ದವರು ಸೇರಿದಂತೆ ವಿವಿಧ ವೈಯಕ್ತಿಕ ಸಮಸ್ಯೆ ಎದುರಿಸುತ್ತಿರುವವರು,
ಕುಟುಂಬದ ಸದಸ್ಯರು ಭಾಗವಹಿ
ಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT