ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಗುರುವಾರ 7–9–1995

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 16:17 IST
Last Updated 6 ಸೆಪ್ಟೆಂಬರ್ 2020, 16:17 IST
   

ವಿದ್ಯುತ್‌ ಯೋಜನೆಗಳಿಗೆ ಟೆಂಡರ್‌ ವ್ಯವಸ್ಥೆ

ನವದೆಹಲಿ, ಸೆ. 6 (ಪಿಟಿಐ)– ವಿದ್ಯುತ್‌ ಯೋಜನೆಗಳಿಗೆ ಪೈಪೋಟಿಯ ಟೆಂಡರ್‌ ಸ್ವೀಕರಿಸಲು ಸಮಿತಿಯೊಂದನ್ನು ಮುಂದಿನ 10 ದಿನಗಳಲ್ಲಿ ರಚಿಸಲಾಗುವುದು ಎಂದು ಕೇಂದ್ರ ವಿದ್ಯುತ್‌ ಸಚಿವ ಎನ್‌.ಕೆ.ಪಿ.ಸಾಳ್ವೆ ಅವರು ಇಂದು ಪ್ರಕಟಿಸಿ, ಈ ಸಮಿತಿ ಯಾವುದೇ ರಹಸ್ಯಗಳಲ್ಲಿದೆ ಕೆಲಸ ಮಾಡುವುದು ಎಂದರು.

ಈ ಮಧ್ಯೆ ಹಣಕಾಸು ಸಚಿವ ಡಾ. ಮನಮೋಹನ ಸಿಂಗ್‌ ಅವರು ಇಲ್ಲಿ ಜರುಗಿದ ಆರ್ಥಿಕ ಪತ್ರಿಕೆಗಳ ಸಂಪಾದಕರ ಸಭೆಯಲ್ಲಿ ಮಾತನಾಡುತ್ತಾ, ವಿದ್ಯುತ್‌, ದೂರವಾಣಿ ಹಾಗೂ ಪೆಟ್ರೋಲಿಯಂ ರಂಗಗಳ ಬೃಹತ್‌ ಯೋಜನೆಗಳಿಗೆ ಖಾಸಗಿಯವರನ್ನು ಆಹ್ವಾನಿಸುವಾಗ ಬರುವ ಭ್ರಷ್ಟಾಚಾರದ ಆರೋಪಗಳನ್ನು ನಿವಾರಿಸಲು ಇಂತಹ ವ್ಯವಸ್ಥೆ ಅಗತ್ಯ ಎಂದು ಪ್ರತಿಪಾದಿಸಿದರು.

ADVERTISEMENT

ಆಂಧ್ರ: ಇಂದು ಚಂದ್ರಬಾಬು ವಿಶ್ವಾಸಮತ ಕೋರಿಕೆ

ಹೈದರಾಬಾದ್‌, ಸೆ. 6 (ಯುಎನ್‌ಐ)– ಆಂಧ್ರ ಪ್ರದೇಶದ ಎನ್‌.ಚಂದ್ರಬಾಬು ನಾಯ್ಡು ಅವರ ನೇತೃತ್ವದ ಸಚಿವ ಸಂಪುಟವು ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಕೇಳಲಿದೆ. ವಿಶ್ವಾಸಮತಕ್ಕೆ ನಾಯ್ಡು ಮತ್ತು ಮಾಜಿ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್‌ ಅವರು ತಮ್ಮ ಪಕ್ಷದ ಶಾಸಕರಿಗೆ ಪ್ರತ್ಯೇಕ ‘ವಿಪ್‌’ಗಳನ್ನು ಹೊರಡಿಸಿದ್ದಾರೆ.

ನೀವು ನೀಡಿದ ಆದೇಶವನ್ನು ಉಲ್ಲಂಘಿಸಿದ ಶಾಸಕರು ಅರ್ಹತೆ ಕಳೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ಚಂದ್ರಬಾಬು ನಾಯ್ಡು ‘ಕಾನೂನು ತನ್ನ ಕೆಲಸ ಮಾಡುತ್ತದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.