ADVERTISEMENT

ಅಪಘಾತ: ಏಳು ಯಾತ್ರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಕಠ್ಮಂಡು (ಪಿಟಿಐ): ಪಶ್ಚಿಮ ನೇಪಾಳದ ಕಣಿವೆ­ಯೊಂದಕ್ಕೆ ಜೀಪು ಜಾರಿ ಬಿದ್ದ ಪರಿಣಾಮ ಏಳು ಜನ ಹಿಂದೂ ಯಾತ್ರಿಗಳು ಮೃತಪಟ್ಟಿದ್ದು, ಏಳು ಜನ ಗಾಯಗೊಂಡಿದ್ದಾರೆ.

‘ಯಾತ್ರಿಗಳು ಸಿರ್ಶೆಕೋಟ್‌ನ ಅಕಾಲ­ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದು, ಕಣಿವೆಯ ಕಿರಿದಾದ ದಾರಿಯಲ್ಲಿ ಹೋಗುತ್ತಿರುವಾಗ ವಾಹನ ಜಾರಿ 200 ಮೀ. ಆಳದ ಪ್ರಪಾತಕ್ಕೆ ಉರುಳಿದೆ’ ಎಂದು ಇಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.