ADVERTISEMENT

ಉಗ್ರರ ವಿರುದ್ಧ ವಾದ ಮಂಡಿಸುವ ವಕೀಲ ನಾಪತ್ತೆ

ಪಿಟಿಐ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ಢಾಕಾ : ಇಸ್ಲಾಮಿ ಉಗ್ರಗಾಮಿ ಮುಖಂಡರ ವಿರುದ್ಧ ಕೋರ್ಟ್‌ಗಳಲ್ಲಿ ವಾದ ಮಾಡುತ್ತಿರುವ ಬಾಂಗ್ಲಾದೇಶದ ಖ್ಯಾತ ಹಿಂದೂ ವಕೀಲ ರತೀಶ್‌ ಚಂದ್ರ ಭೌಮಿಕ್‌ ಅವರು ನಾಪತ್ತೆಯಾಗಿದ್ದಾರೆ. ಇವರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಳೆದ ಶುಕ್ರವಾರ ಬೆಳಿಗ್ಗೆ ಮನೆಯಿಂದ ಹೋದವರು ಮನೆಗೆ ಮರಳಲಿಲ್ಲ. ಮೊಬೈಲ್‌ ದೂರವಾಣಿ ‘ಸ್ವಿಚ್‌ಡ್‌ ಆಫ್‌’ ಆಗಿತ್ತು. ಉಗ್ರ ಜಮಾತ್‌ ಉಲ್‌ ಮುಜಾಹಿದ್ದೀನ್‌ನ ವಿರುದ್ಧ ಇವರು ವಾದ ಮಂಡಿಸಿದ್ದರು. 15 ದಿನಗಳ ಹಿಂದೆ ಇವನಿಗೆ ಕೋರ್ಟ್‌ ಮರಣದಂಡನೆ ವಿಧಿಸಿತ್ತು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT