ADVERTISEMENT

ಕಠ್ಮಂಡು: ಸಂಭ್ರಮದ ಶ್ರೀನಿವಾಸ ಕಲ್ಯಾಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಕಠ್ಮಂಡು (ಪಿಟಿಐ):  ಕೇಂದ್ರ ಕಠ್ಮಂಡುವಿನಲ್ಲಿ ಸೋಮವಾರ ತಿರುಪತಿ ತಿಮ್ಮಪ್ಪನ `ಶ್ರೀನಿವಾಸ ಕಲ್ಯಾಣ~ ಮಹೋತ್ಸವವನ್ನು ನೇಪಾಳಿ ಭಕ್ತವೃಂದ ಭಕ್ತಿ ಭಾವದಿಂದ ಆಚರಿಸಿತು.

ಇದೇ ಮೊದಲ ಬಾರಿಗೆ ದೇಶದಿಂದ ಹೊರಗೆ ಬಾಲಾಜಿ ಉತ್ಸವ ಮೂರ್ತಿಯನ್ನು ಕೊಂಡೊಯ್ದಿದ್ದಾಗಿ ಆಯೋಜಕರು ತಿಳಿಸಿದ್ದಾರೆ.
 
ಕಠ್ಮಂಡು ಮತ್ತು ಸುತ್ತಲಿನ ಪ್ರದೇಶದಲ್ಲಿರುವ ಹಿಂದೂ ಹಾಗೂ ನೇಪಾಳಿ ಭಕ್ತರು ಸರತಿ ಸಾಲಿನಲ್ಲಿ ನಿಂತು ತಿರುಪತಿ ತಿಮ್ಮಪ್ಪನಿಗೆ ಭಕ್ತಿ ಸಮರ್ಪಿಸಿ, `ಶ್ರೀನಿವಾಸ - ಶ್ರೀದೇವಿ - ಭೂದೇವಿ~ ಕಲ್ಯಾಣ ಮಹೋತ್ಸವಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.