ಅದ್ದು (ಮಾಲ್ಡೀವ್ಸ್), (ಐಎಎನ್ಎಸ್): ~ಅಜ್ಮಲ್ ಕಸಾಬ್ ಒಬ್ಬ ಭಯೋತ್ಪಾದಕ, ಆತನನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಲೇಬೇಕು~ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರು ಇಲ್ಲಿ ನಡೆಯುತ್ತಿರುವ 17ನೇ ಸಾರ್ಕ್ ಶೃಂಗಸಭೆ ಸಂದರ್ಭದಲ್ಲಿ ಎರಡು ದೇಶಗಳ ನಡುವಿನ ನಿಯೋಗ ಮಟ್ಟದ ಮಾತುಕತೆ ನಂತರ ಗುರುವಾರ ಇಲ್ಲಿ ಹೇಳಿದರು.
ಶೀರ್ಘದಲ್ಲಿಯೇ ನ್ಯಾಯಾಂಗ ಅಯೋಗವು ಭಾರತಕ್ಕೆ ಆಗಮಿಸಲಿದ್ದು, ಮುಂಬೈ ಮೇಲೆ ದಾಳಿ (26/11)ನಡೆಸಿದ ಆರೋಪಿ ವಿರುದ್ಧ ನಡೆಯುತ್ತಿರುವ ವಿಚಾರಣೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದರು.
26/11ರ ಮುಂಬೈ ದಾಳಿ ಪ್ರಕರಣದಲ್ಲಿ ಜೀವಂತವಾಗಿ ಸೆರೆ ಸಿಕ್ಕ ಏಕೈಕ ಉಗ್ರ ಹಾಗೂ ಪಾಕಿಸ್ತಾನದ ಪ್ರಜೆ ಅಜ್ಮಲ್ ಕಸಾಬ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.