ADVERTISEMENT

ನೇಪಾಳದ ಜತೆ ಸಂಬಂಧ ವೃದ್ಧಿಗೆ ಬದ್ಧ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭರವಸೆ

ಪಿಟಿಐ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ನೇಪಾಳ ಪ್ರವಾಸದಲ್ಲಿರುವ ಕೋವಿಂದ್‌ ಅವರಿಗೆ ಅಧಿಕಾರಿಯೊಬ್ಬರು ಸಸಿ ನೀಡಿದರು. ಸವಿತಾ ಕೋವಿಂದ್ ಇದ್ದಾರೆ– ಪಿಟಿಐ ಚಿತ್ರ
ನೇಪಾಳ ಪ್ರವಾಸದಲ್ಲಿರುವ ಕೋವಿಂದ್‌ ಅವರಿಗೆ ಅಧಿಕಾರಿಯೊಬ್ಬರು ಸಸಿ ನೀಡಿದರು. ಸವಿತಾ ಕೋವಿಂದ್ ಇದ್ದಾರೆ– ಪಿಟಿಐ ಚಿತ್ರ   

ಕಠ್ಮಂಡು: ‘ನೇಪಾಳದ ನಾಯಕತ್ವದೊಂದಿಗೆ ಕೆಲಸ ಮಾಡಲು ಭಾರತ ಬದ್ಧವಾಗಿದೆ. ಎರಡೂ ದೇಶಗಳ ಜನರ ಅನುಕೂಲಕ್ಕಾಗಿ ಉಭಯದೇಶಗಳ ಸಂಬಂಧ ಬಲಪಡಿಸುತ್ತೇವೆ’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ನೇಪಾಳದ ಮೊದಲ ಮಹಿಳಾ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಎರಡನೇ ಬಾರಿ ಅಧ್ಯಕ್ಷರಾಗಿ ಚುನಾಯಿರಾಗಿರುವುದಕ್ಕೆ ಅಭಿನಂದಿಸಿದ ಕೋವಿಂದ್, ‘ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಪಡಿಸಲು, ಭಾರತ ಮತ್ತು ನೇಪಾಳ ಜನರ ಶ್ರೇಯೋಭಿವೃದ್ಧಿಗಾಗಿ ವಿದ್ಯಾ ಅವರೊಂದಿಗೆ ಕೈಜೋಡಿಸುತ್ತೇವೆ’ ಎಂದು ಕೋವಿಂದ್ ಅವರು ಭಾರತ ರಾಯಭಾರಿ ಮೂಲಕ ವಿದ್ಯಾ ಅವರಿಗೆ ತಲುಪಿಸಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT