ADVERTISEMENT

ಭಾರತ ತಂತ್ರಜ್ಞರಿಂದ ಹಡಗು ದುರಸ್ತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಕ್ವಾಲಾಲಂಪುರ (ಪಿಟಿಐ): ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ದಿಕ್ಕುತಪ್ಪಿ ಕೆಟ್ಟು ನಿಂತಿದ್ದ ಹಡಗೊಂದನ್ನು ಭಾರತದ ತಂತ್ರಜ್ಞರು  ದುರಸ್ತಿ ಮಾಡಿದ್ದಾರೆ.

ಅಜಮರಾ ಕ್ವೆಸ್ಟ್ ನಿಂದ ಮಲೇಷ್ಯಾಕ್ಕೆ ಹೋಗುತ್ತಿದ್ದ ಈ ಐಷಾರಾಮಿ ಹಡಗಿನ ಎಂಜಿನ್ ಕೋಣೆಯಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಹಡಗು ದಿಕ್ಕುತಪ್ಪಿ ಫಿಲಿಪ್ಪೀನ್ಸ್‌ನ ದಕ್ಷಿಣ ಕಡಲಿನಲ್ಲಿ 24 ಗಂಟೆಗಳ ಕಾಲ ಕೆಟ್ಟು ನಿಂತಿತ್ತು. ಹಡಗಿನಲ್ಲಿ 58 ಭಾರತೀಯರು ಸೇರಿದಂತೆ ಒಂದು ಸಾವಿರ ಪ್ರಯಾಣಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.