ಪೆಶಾವರ, ಪಾಕಿಸ್ತಾನ: ವಾಯವ್ಯ ಪಾಕಿಸ್ತಾನದಲ್ಲಿ ವಿವಾದಿತ ಅರಣ್ಯ ಭೂಮಿ ಸ್ವಾಧೀನಕ್ಕಾಗಿ ಸ್ಥಳೀಯ ಬುಟಕಟ್ಟು ಜನರ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಕಳೆದ ಮೂರು ದಿನಗಳಲ್ಲಿ ಕನಿಷ್ಠ 15 ಜನರು ಹತರಾಗಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಬುಡಕಟ್ಟು ಪ್ರದೇಶಗಳಲ್ಲಿ ಸೋಮವಾರ ಭದ್ರತೆ ಹೆಚ್ಚಿಸಲಾಗಿದೆ.
‘ಬಂದೂಕುಧಾರಿಗಳುಭಾರಿ ಶಸ್ತ್ರಾಸ್ತ್ರಗಳು ಮತ್ತು ರಾಕೆಟ್ ಲಾಂಚರ್ಗಳನ್ನು ಸಹ ಬಳಸಿದ್ದಾರೆ. ಇದರಿಂದ ಶನಿವಾರ ನಾಲ್ಕು ಜನರು ಮೃತಪಟ್ಟಿದ್ದರು.ಭಾನುವಾರ ಮತ್ತು ಸೋಮವಾರ 11 ಮಂದಿ ಮೃತಪಟ್ಟಿದ್ದಾರೆ ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುರ್ರಂ ಜಿಲ್ಲಾಡಳಿತವು ವದಂತಿಗಳು ಹರಡದಂತೆ ತಡೆಯಲು ಖೈಬರ್ ಪಖ್ತುಂಖ್ವಾದಲ್ಲಿ ದೂರವಾಣಿ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಕಾದಾಟ ನಡೆಸುತ್ತಿರುವ ಗುಂಪುಗಳ ನಡುವೆ ಕದನ ವಿರಾಮಕ್ಕೆ ಸೇನೆ ಮತ್ತು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಿವಾದಿತ ಪ್ರದೇಶದಿಂದ ಉರುವಲು ಸಂಗ್ರಹಿಸುವುದನ್ನು ನಿರ್ಬಂಧಿಸಲಾಗಿದೆ.
ಪೆವಾರ್ ಬುಡಕಟ್ಟು ಜನರು ಮತ್ತು ಕುರ್ರಂ ಜಿಲ್ಲೆಯ ತೇರಿ ಮೆಗೆಲ್ ಗ್ರಾಮಕ್ಕೆ ಸೇರಿದ ಗೈಡು ಬುಡಕಟ್ಟು ಜನರ ನಡುವೆ ಶನಿವಾರ ಮಧ್ಯಾಹ್ನ ಘರ್ಷಣೆ ಆರಂಭವಾಗಿತ್ತು. ಎರಡೂ ಕಡೆಯ 100ಕ್ಕೂ ಹೆಚ್ಚು ಜನರು ಬಂದೂಕುಗಳಿಂದ ದಾಳಿ ನಡೆಸಿದ್ದಾರೆ ಎಂದು ಕುರಂನ ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.