ADVERTISEMENT

ನೇಪಾಳ: ನಾಲ್ವರು ಭಾರತೀಯರ ಸಾವು

ಪಿಟಿಐ
Published 30 ಜನವರಿ 2020, 16:48 IST
Last Updated 30 ಜನವರಿ 2020, 16:48 IST

ಕಠ್ಮಂಡು: ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಭಾರತೀಯರು ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದಾರೆ.‌

ಮೃತರು ಬಿಹಾರ ಮೂಲದವರಾಗಿದ್ದು, ಗೋಣಿ ಮತ್ತು ಪ್ಲಾಸ್ಟಿಕ್‌ ಚೀಲಗಳನ್ನು ಸಂಗ್ರಹಿಸುವ ಕಾರ್ಮಿಕರಾಗಿದ್ದರು. ಕಳೆದ ಐದು ವರ್ಷಗಳಿಂದ ಸಿದ್ಧಾರ್ಥನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆಯಲ್ಲಿ ಮಿತಿ ಮೀರಿ ಸಂಗ್ರಹಿಸಲಾಗಿತ್ತು. ಕಟ್ಟಿಟ್ಟಿದ್ದ ಚೀಲಗಳ ಮೂಟೆ ಮೃತರ ಮೇಲೆ ಬಿದ್ದಿವೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT