ದುಬೈ: ಅರಬ್ಬಿ ಸಮುದ್ರದಲ್ಲಿ ಹುಟ್ಟಿದ ಶಾಹೀನ್ ಚಂಡಮಾರುತ ಒಮನ್ನಲ್ಲಿ ಭಾರಿ ಮಳೆ, ಅನಾಹುತವನ್ನು ಉಂಟುಮಾಡಿದ್ದು, ಕನಿಷ್ಠ ಐವರು ಮೃತಪಟ್ಟಿದ್ದಾರೆ. ಇರಾನ್ನಲ್ಲಿ ಕೆಲವು ಮೀನುಗಾರರು ನಾಪತ್ತೆಯಾಗಿದ್ದಾರೆ.
ಚಂಡಮಾರುತದಿಂದ ಉಂಟಾದ ಪ್ರವಾಹದಿಂದ ವಾಹನ ಸವಾರರೊಬ್ಬ ಕೊಚ್ಚಿ ಹೋಗಿದ್ದ, ಅವರ ಶವವನ್ನು ಒಮನ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಶಾಹೀನ್ ಚಂಡಮಾರುತದಿಂದಾಗಿ ಒಮನ್ನಲ್ಲಿ ಭಾನುವಾರಿ ಭಾರಿ ಮಳೆ ಸುರಿದು, ಭೂಕುಸಿತ ಉಂಟಾಯಿತು. ಈ ಘಟನೆಯಲ್ಲಿ ಏಷ್ಯಾ ರಾಷ್ಟ್ರಗಳ ಇಬ್ಬರು ವಿದೇಶೀಯರು ಸಾವನ್ನಪ್ಪಿದ್ದರು. ಮಗುವೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು.
ಪಾಕಿಸ್ತಾನ ಗಡಿ ಭಾಗ ಸಮೀಪದ ಇರಾನ್ನ ಪಸಬಂದರ್ನಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಐವರು ಮೀನುಗಾರರಲ್ಲಿ ಒಬ್ಬರ ಮೃತದೇಹವನ್ನು ರಕ್ಷಣಾಪಡೆಯವರು ಪತ್ತೆ ಮಾಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ವಾಹಿನಿ ವರದಿ ಮಾಡಿದೆ.
‘ಶಾಹೀನ್ ಚಂಡಮಾರುತದಿಂದ ಬೀಸುತ್ತಿರುವ ಗಾಳಿಯ ವೇಗ ಗಂಟೆಗೆ 90 ಕಿ.ಮೀ.ನಷ್ಟಿದ್ದು, ದುರ್ಬಲಗೊಳ್ಳುತ್ತಿದೆ‘ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಉಷ್ಣವಲಯ ಪ್ರದೇಶದಲ್ಲಿ ಚಂಡಮಾರುತವು ದುರ್ಬಲಗೊಳ್ಳುತ್ತದೆ ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.