ADVERTISEMENT

ಹವಾಯಿಯಲ್ಲಿ ಭಾರಿ ಮಳೆ: ಮಾವಿ ಅಣೆಕಟ್ಟೆಯಲ್ಲಿ ಬಿರುಕು, ಜನರ ಸ್ಥಳಾಂತರ

ಜಲಾಶಯ ಸುತ್ತಮುತ್ತಲಿನ ಜನರ ಸ್ಥಳಾಂತರ

ಏಜೆನ್ಸೀಸ್
Published 9 ಮಾರ್ಚ್ 2021, 5:59 IST
Last Updated 9 ಮಾರ್ಚ್ 2021, 5:59 IST
ಹವಾಯ್‌ ದ್ವೀಪದ ಮಾವಿ ಕೌಂಟಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದು ರಸ್ತೆಯಲ್ಲಿ ಪ್ರವಾಹದಂತೆ ನೀರು ಹರಿಯಿತು.
ಹವಾಯ್‌ ದ್ವೀಪದ ಮಾವಿ ಕೌಂಟಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದು ರಸ್ತೆಯಲ್ಲಿ ಪ್ರವಾಹದಂತೆ ನೀರು ಹರಿಯಿತು.   

ಹೊನೊಲುಲು: ಭಾರಿ ಮಳೆಯಿಂದಾಗಿ ಹವಾಯಿ ದ್ವೀಪದ ಮಾವಿ ಅಣೆಕಟ್ಟೆಯಲ್ಲಿಬಿರುಕು ಕಾಣಿಸಿಕೊಂಡಿದ್ದು, ಜಲಾಶಯದ ಹತ್ತಿರವಿರುವ ಹೈಕುವಿನ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ.

ಫೇಸ್‌ಬುಕ್ ಮೂಲಕ ಮಾವಿ ಕೌಂಟಿ ಮೇಯರ್ ಮೈಕೆಲ್ ವಿಕ್ಟೊರಿನೊ ಮಾತನಾಡಿ, ‘ಪರಿಹಾರ ಕಾರ್ಯಕ್ಕೆ ಬೇಕಾದ ಸಂಪನ್ಮೂಲಗಳನ್ನು ಜಲಾಶಯ ಆಸುಪಾಸಿನ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ‘ ಎಂದು ತಿಳಿಸಿದ್ದಾರೆ.

‘ಕಳೆದ ಇಪ್ಪತ್ತೈದು ವರ್ಷಗಳಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿರಲಿಲ್ಲ. ಹಿಂದೆಂದೂ ಕಂಡಿರಯದಂತಹ ಪ್ರವಾಹ ಪರಿಸ್ಥಿತಿಯನ್ನುಕಾಣುತ್ತಿದ್ದೇವೆ. ಬಹಳ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ‘ ಎಂದು ಮೈಕೆಲ್ ಹೇಳಿದ್ದಾರೆ.

ADVERTISEMENT

ಮಾವಿ ಉತ್ತರ ಕರಾವಳಿಯ ಹೈಕು ಪ್ರದೇಶದಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯ ನಡುವೆ 33.5 ಸೆಂಟಿಮೀಟರ್ ಮಳೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.