ADVERTISEMENT

ನೇಪಾಳದಲ್ಲಿ ಬಸ್-ಕಾರು ಡಿಕ್ಕಿ; ನಾಲ್ವರು ಭಾರತೀಯ ಪ್ರವಾಸಿಗರು ಸಾವು

ಪಿಟಿಐ
Published 25 ಏಪ್ರಿಲ್ 2022, 6:57 IST
Last Updated 25 ಏಪ್ರಿಲ್ 2022, 6:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಠ್ಮಂಡು; ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಭಾರತೀಯ ಪ್ರವಾಸಿಗರೂ ಸೇರಿದಂತೆ ಐವರು ಮೃತಪಟ್ಟ ಘಟನೆ ನೇಪಾಳದ ದಾದಿಂಗ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತರನ್ನು ಉತ್ತರ ಪ್ರದೇಶದ ಬೀಮಲ್ ಚಂದ್ರ ಅಗರವಾಲ್, ಸಾಧನಾ ಅಗರವಾಲ್ ಸಂದ್ಯಾ ಅಗರವಾಲ್ ಹಾಗೂ ರಾಕೇಶ್ ಅಗರವಾಲ್ ಎಂದು ಗುರುತಿಸಲಾಗಿದೆ‌. ಮೃತರು ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ.

ಕಾಠ್ಮಂಡುವಿನಿಂದ 200ಕಿಮೀ ದೂರ ಇರುವ ಪೋಕಹರಾ ವಿಜ್ಞಾನ ನಗರದ ದರ್ಶನ ಮುಗಿಸಿಕೊಂಡು ಅಗರವಾಲ್ ಕುಟುಂಬ ವಾಪಸ್ ಕಠ್ಮಂಡುವಿಗೆ ಬರುವಾಗ ಪೃಥ್ವಿ ಹೆದ್ದಾರಿಯ ತಾಕರೆ ಎಂಬ ಪ್ರದೇಶದಲ್ಲಿ ಬಸ್ ಕಾರ್ ಮುಖಾಮುಖಿ ಸಂಭವಿಸಿದೆ. ಘಟನೆಯಲ್ಲಿ ನೇಪಾಳದ ಬಸ್ ಚಾಲಕ ದಿಲ್ ಬಹದ್ದೂರ ಬಾಸನೇತ್ ಕೂಡ ಮೃತಪಟ್ಟಿದ್ದಾರೆ‌.

ADVERTISEMENT

ನೇಪಾಳ ವ್ಯಾಪಕ ಗುಡ್ಡಗಾಡು ಹೊಂದಿರುವುದರಿಂದ ರಸ್ತೆ ಸಮಸ್ಯೆ ಬಿಗಡಾಯಿಸಿದೆ. ಹೀಗಾಗಿ ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದರೂ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.