ADVERTISEMENT

ಬದಲಾಗುತ್ತಿರುವ ಜಗತ್ತಿನಲ್ಲಿ ಯುಎಇ, ಭಾರತ ಜತೆಯಾಗಿ ಕೆಲಸ ಮಾಡಬೇಕು: ಜೈಶಂಕರ್‌

ಪಿಟಿಐ
Published 27 ನವೆಂಬರ್ 2020, 6:16 IST
Last Updated 27 ನವೆಂಬರ್ 2020, 6:16 IST
ಜೈ ಶಂಕರ್‌–ಪಿಟಿಐ ಚಿತ್ರ
ಜೈ ಶಂಕರ್‌–ಪಿಟಿಐ ಚಿತ್ರ   

ಅಬುಧಾಬಿ: ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತ ಮತ್ತು ಅರಬ್‍ ಸಂಯುಕ್ತ ಸಂಸ್ಥಾನ (ಯುಎಇ) ರಾಷ್ಟ್ರಗಳು ಜೊತೆಯಾಗಿ ಕೆಲಸ ಮಾಡಬೇಕಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದರು.

ಎರಡು ದಿನಗಳ ಯುಎಇ ಭೇಟಿಯಲ್ಲಿ ಜೈ ಶಂಕರ್‌ ಅವರು ಅಲ್ಲಿನ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್‌ ಅವರೊಂದಿಗೆ ಸಭೆ ನಡೆಸಿದರು.

ವ್ಯಾಪಾರ, ಹೂಡಿಕೆ, ಮೂಲಸೌಕರ್ಯ, ಇಂಧನ, ಆಹಾರ ಭದ್ರತೆ ಮತ್ತು ರಕ್ಷಣಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ವೃದ್ದಿ ಕುರಿತು ಈ ವೇಳೆ ಚರ್ಚಿಸಲಾಯಿತು ಎಂದು ಅವರು ಹೇಳಿದರು.

ADVERTISEMENT

ಕೋವಿಡ್‌ ಅನುಭವಗಳು ಭಾರತ ಮತ್ತು ಯುಎಇಗೆ ಪಾಠ ಕಲಿಸಿವೆ. ಹಾಗಾಗಿ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಜತೆಯಾಗಿ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.