ADVERTISEMENT

ಢಾಕಾ: ಇಸ್ಕಾನ್‌ ದೇಗುಲದಲ್ಲಿ ದಾಂದಲೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 21:42 IST
Last Updated 18 ಮಾರ್ಚ್ 2022, 21:42 IST

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿನ ಇಸ್ಕಾನ್‌ ರಾಧಾಕೃಷ್ಣ ದೇವಸ್ಥಾನದ ಮೇಲೆ ಸುಮಾರು 200 ಜನರಿದ್ದ ಗುಂಪೊಂದು ದಾಳಿ ನಡಸಿದ್ದು, ಭಕ್ತರ ಮೇಲೆ ಹಲ್ಲೆ ನಡೆಸಿ ದೇವಸ್ಥಾನದಲ್ಲಿ ದಾಂದಲೆ ಮಾಡಿದೆ.

ಗುರುವಾರ ಘಟನೆ ನಡೆದಿದೆ. ಗುರುಪೌರ್ಣಿಮೆ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದೇ ವೇಳೆ ಗುಂಪು ದಾಳಿ ನಡೆದಿದೆ ಎಂದು ಕೋಲ್ಕತ್ತ ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ್ ದಾಸ್ ಹೇಳಿದ್ದಾರೆ.

ಎನ್‌ಡಿಟಿವಿ ವರದಿ ಪ್ರಕಾರ, ದಾಂದಲೆಯಿಂದಾಗಿ ಮೂವರು ಭಕ್ತರಿಗೆ ಗಾಯವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.