ಕೊಲೊಂಬೊ: ಮಾಲ್ಡೀವ್ಸ್ ಪ್ರವಾಸದ ಬಳಿಕ ಪ್ರಧಾನಿ ಮೋದಿಶ್ರೀಲಂಕಾಕ್ಕೆ ಭೇಟಿನೀಡಿದ್ದು, ಆತ್ಮಾಹುತಿ ದಾಳಿಯ ನಂತರ ಶ್ರೀಲಂಕಾಗೆ ಭೇಟಿ ನೀಡುತ್ತಿರುವ ಮೊದಲ ವಿದೇಶಿ ನಾಯಕನೆಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಮೋದಿಯವರನ್ನು ಶ್ರೀಲಂಕಾಪ್ರಧಾನಿರಾನಿಲ್ ವಿಕ್ರಮ ಸಿಂಘೆ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಸಿರಿಸೇನ, ವಿಪಕ್ಷ ನಾಯಕ ಮಹೀಂದ್ರಾ ರಾಜಪಕ್ಸೆಅವರನ್ನು ಮೋದಿ ಭೇಟಿಯಾದರು. ಈಸ್ಟರ್ ಹಬ್ಬದ ದಿನ ದಾಳಿಗೊಳಗಾಗಿದ್ದ ಸಂತ ಆಂಥೋನಿ ಚರ್ಚ್ಗೆ ಭೇಟಿನೀಡಿ ಶ್ರದ್ಧಾಂಜಲಿಸಲ್ಲಿಸಿದರು.
ಮಾಲ್ಡೀವ್ಸ್ನಲ್ಲಿ ಅತ್ಯುತ್ತಮ ವಿದೇಶಿ ಗೌರವಕ್ಕೆ ಭಾಜನರಾದ ಪ್ರಧಾನಿ ಮೋದಿಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ್ದರು.ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ,ಉಗ್ರವಾದದ ನಿರ್ಮೂಲನೆ, ಮತ್ತು ಜಾಗತಿಕ ತಾಪಮಾನಗಳ ಹೆಚ್ಚಳ ಕುರಿತುಈ ಪ್ರವಾಸದಲ್ಲಿ ಚರ್ಚಿಸಲಾಯಿತು.
ಇದನ್ನು ಓದಿ: ಶ್ರೀಲಂಕಾ–ಮಾಲ್ಡೀವ್ಸ್ಗೆ ಮೋದಿ ಪ್ರವಾಸ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.