ADVERTISEMENT

ಮ್ಯಾನ್ಮಾರ್‌: ತುರ್ತು ಪರಿಸ್ಥಿತಿ ಅಂತ್ಯ; ಚುನಾವಣೆಗೆ ಸಿದ್ಧತೆ

ಪಿಟಿಐ
Published 31 ಜುಲೈ 2025, 15:28 IST
Last Updated 31 ಜುಲೈ 2025, 15:28 IST
ಮ್ಯಾನ್ಮಾರ್‌ನ ಚುನಾವಣಾ ಆಯೋಗವು ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದೆ–ಎಎಫ್‌ಪಿ ಚಿತ್ರ
ಮ್ಯಾನ್ಮಾರ್‌ನ ಚುನಾವಣಾ ಆಯೋಗವು ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದೆ–ಎಎಫ್‌ಪಿ ಚಿತ್ರ   

ಬ್ಯಾಂಕಾಕ್‌: ನಾಲ್ಕೂವರೆ ವರ್ಷದಿಂದ ಸೇನಾಡಳಿತದಡಿಯಲ್ಲಿದ್ದ ಮ್ಯಾನ್ಮಾರ್‌ನ ಸೇನೆಯು ಗುರುವಾರ ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆದಿರುವುದಾಗಿ ಘೋಷಿಸಿದೆ.

ಈ ವರ್ಷಾಂತ್ಯದಲ್ಲಿ ಹೊಸದಾಗಿ ಚುನಾವಣೆ ನಡೆಸುವ ಸಂಬಂಧ ಆಡಳಿತ ವಿಭಾಗಗಳನ್ನು ಪುನರಾಚನೆ ಮಾಡಲಾಗಿದೆ ಎಂದು ತಿಳಿಸಿದೆ.

ಡಿಸೆಂಬರ್‌ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧ ಹಾಗೂ ಸೇನಾ ವಿರೋಧಿ ಹೋರಾಟದಿಂದ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವ ಕುರಿತು ಅನುಮಾನ ವ್ಯಕ್ತವಾಗಿದೆ. 

ADVERTISEMENT

ಸೇನಾ ಮುಖ್ಯಸ್ಥ ಮಿನ್‌ ಅಂಗ್‌ ಹ್ಲಿಯಾಂಗ್ ಕೂಡ ಸರ್ಕಾರದ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಗುರುವಾರ ರಾತ್ರಿಯಿಂದಲೇ ತುರ್ತು ಪರಿಸ್ಥಿತಿ ಕೊನೆಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.