ADVERTISEMENT

ಬೀಜದಿಂದ ಭತ್ತದ ತದ್ರೂಪಿ ಬೆಳೆ

ವಿಜ್ಞಾನಿಗಳ ಸಂಶೋಧನೆ

ಪಿಟಿಐ
Published 13 ಡಿಸೆಂಬರ್ 2018, 18:32 IST
Last Updated 13 ಡಿಸೆಂಬರ್ 2018, 18:32 IST

ಲಾಸ್ಏಂಜಲೀಸ್:‌ಬೀಜದಿಂದ ಭತ್ತದ ಸಸಿಯ ತದ್ರೂಪಿಯನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇವರಲ್ಲಿ ಭಾರತ ಸಂಜಾತರೂ ಇರುವುದು ವಿಶೇಷ. ಅಧಿಕ ಇಳುವರಿ ಮತ್ತು ರೋಗನಿರೋಧಕ ಶಕ್ತಿ ಹೊಂದಿರುವ ಈ ಭತ್ತ ಪ್ರಮುಖ ಸಂಶೋಧನೆಯಾಗಿ ಹೊರಹೊಮ್ಮಿದೆ.

ಭತ್ತವನ್ನೇ ಹೋಲುವ ತದ್ರೂಪಿಯ ಸೃಷ್ಟಿಯು ಕೃಷಿ ಪ್ರಪಂಚದ ದೊಡ್ಡ ಬೆಳವಣಿಗೆ ಎಂದು ಕ್ಯಾಲಿಫೋರ್ನಿಯಾ ಮತ್ತು ಅಮೆರಿಕದ ಡೆವಿಸ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ

ಪ್ರತಿ ವರ್ಷ ಅಧಿಕ ದರ ಹೈಬ್ರೀಡ್‌ ಬೀಜ ಕೊಳ್ಳುವ ಬದಲು ರೈತರು ತಮ್ಮದೇ ಹೈಬ್ರೀಡ್‌ ಸಸಿಗಳನ್ನು ಮರುನಾಟಿ ಮಾಡಬಹುದು. ಇದರಿಂದ ವರ್ಷ ಕಳೆದಂತೆ ಉತ್ತಮ ಇಳುವರಿ ಪಡೆಯಬಹುದು. ಹೈಬ್ರೀಡ್‌ ಬೀಜ ಹಲವರಿಗೆ ಭಾರಿ ಖರ್ಚಿನದು.

ADVERTISEMENT

‘ಕೃಷಿಯನ್ನೇ ಬದಲಾಯಿಸುವ ಈ ಗುರಿ ಬೇಕಾಗಿದೆ’ ಎಂದು ಡೆವಿಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಲ ವೆಂಕಟೇಶನ್‌ ಸುಂದರೇಶನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.