ಪೇಶಾವರ (ಪಿಟಿಐ):ಹಾಡಹಗಲೇ ಇಬ್ಬರು ಸಿಖ್ ವ್ಯಾಪಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಭಾನುವಾರ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾದಲ್ಲಿ ನಡೆದಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ಇತ್ತೀಚಿನ ದಾಳಿ ಇದಾಗಿದೆ.
‘ಬೈಕ್ನಲ್ಲಿ ಧಾವಿಸಿದ ಇಬ್ಬರು ದಾಳಿಕೋರರು ಸಾಲ್ಜೀತ್ ಸಿಂಗ್ (42) ಮತ್ತು ರಂಜೀತ್ ಸಿಂಗ್ (38) ಎಂಬರನ್ನು ಹತ್ಯೆಗೈದಿದ್ದಾರೆ. ಈವರೆಗೆ ಯಾವುದೇ ಗುಂಪು ದಾಳಿ ಹೊಣೆ ಹೊತ್ತಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಮಹಮ್ಮದ್ ಖಾನ್ ಘಟನೆಯನ್ನು ಖಂಡಿಸಿ, ದಾಳಿಕೋರರ ಬಂಧನಕ್ಕೆ ಸೂಚಿಸಿದ್ದಾರೆ. ಈ ಹಿಂದೆ ಸಹ ಇಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.