ಮೆಲ್ಬರ್ನ್ (ಪಿಟಿಐ): ಇಲ್ಲಿನ ಪ್ರಸಿದ್ಧ ‘ಬಿಎಪಿಎಸ್’ ಸ್ವಾಮಿನಾರಾಯಣ ಮಂದಿರಕ್ಕೆ ನುಗ್ಗಿದ ದುಷ್ಕರ್ಮಿಗಳು ದೇವಸ್ಥಾನವನ್ನು ವಿರೂಪಗೊಳಿಸಿದ್ದಾರೆ. ಜೊತೆಗೆ ದೇವಸ್ಥಾನದ ಗೇಟುಗಳ ಮೇಲೆ ಭಾರತ ವಿರೋಧಿ ಬರಹವನ್ನೂ ಬರೆದಿದ್ದಾರೆ ಎಂದು ವರದಿಯಾಗಿದೆ.
ದೇವಸ್ಥಾನವು ರಾಜಧಾನಿಯ ಉತ್ತರ ಭಾಗದಲ್ಲಿರುವ ಮಿಲ್ ಪಾರ್ಕ್ನಲ್ಲಿದೆ. ಘಟನೆ ಎಷ್ಟೊತ್ತಿಗೆ ನಡೆದಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.
‘ಈ ಘಟನೆಯಿಂದ ಮನಸ್ಸಿಗೆ ತೀವ್ರ ನೋವಾಗಿದೆ. ಶಾಂತಿ ಬಯಸುವ ಹಿಂದೂ ಸಮುದಾಯದವರ ದೇವಾಲಯಕ್ಕೆ ಹೀಗಾಗಿರುವುದು ದುಃಖತರಿಸಿದೆ’ ಎಂದು ಇಲ್ಲಿನ ಲಿಬರಲ್ ಪಕ್ಷದ ಸಂಸದ ಇವಾನ್ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.