ADVERTISEMENT

ರೋಹಿಂಗ್ಯಾ ನರಮೇಧ ತಡೆಗೆ ತಕ್ಷಣ ಮುಂದಾಗಿ: ಅಂತರರಾಷ್ಟ್ರೀಯ ನ್ಯಾಯಾಲಯ

ಏಜೆನ್ಸೀಸ್
Published 24 ಜನವರಿ 2020, 19:35 IST
Last Updated 24 ಜನವರಿ 2020, 19:35 IST
ಅಂಗ್ ಸಾನ್‌ ಸೂಕಿ
ಅಂಗ್ ಸಾನ್‌ ಸೂಕಿ    

ದಿ ಹೇಗ್‌: ರೋಹಿಂಗ್ಯಾ ಸಮುದಾಯದವರ ಮೇಲೆ ನಡೆಯುವ ನರಮೇಧವನ್ನು ತಡೆಯಲು ಮ್ಯಾನ್ಮಾರ್‌ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ.

ಮ್ಯಾನ್ಮಾರ್‌ ಪ್ರಧಾನಿ ಅಂಗ್ ಸಾನ್‌ ಸೂಕಿ ಅವರ ವಾದವನ್ನು ತಿರಸ್ಕರಿಸಿದೆ.

ರೋಹಿಂಗ್ಯಾ ವಿಷಯವಾಗಿ ಇದೇ ಮೊದಲ ಬಾರಿಗೆ ಮಧ್ಯಪ್ರವೇಶಿಸಿರುವ ನ್ಯಾಯಾಲಯವು, ‘ನರಮೇಧ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ನಾಲ್ಕು ತಿಂಗಳೊಳಗಾಗಿ ವರದಿ ನೀಡಬೇಕು. ನಂತರ ಪ್ರತಿ ಆರು ತಿಂಗಳಿಗೊಮ್ಮೆ ವರದಿ ನೀಡಬೇಕು’ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.