ADVERTISEMENT

ಕಲ್ಯಾಣ್‌ ಕರ್ನಾಟಕ್‌!

ಬಿ.ಎಂ.ಹನೀಫ್
Published 29 ಅಕ್ಟೋಬರ್ 2019, 19:45 IST
Last Updated 29 ಅಕ್ಟೋಬರ್ 2019, 19:45 IST
curumuru
curumuru   

ಏನ್‌ ಜಿಂಗಾಲಪ್ಪ... ಫುಲ್‌ವೈಟ್‌ ಡ್ರೆಸ್ಸಲ್ಲಿ ಮಿಂಚ್ತಿದೀಯ?

‘ಪಾಲಿಟಿಕ್ಸ್‌ ಸೇರ್ಬುಟ್ಟಿದ್ದೀನಿ ಸಾ..’

ಯಾವ ಪಾರ್ಟಿ?

ADVERTISEMENT

‘ಮೊನ್ನೆ ಏರ್‌ಪೋರ್ಟ್‌ಗೆ ಓಗಿದ್ನಾ? ಅಲ್ಲಿ ಡೀಕೆ ಬಂಡೆಕುಮಾರ್‌ ಬತ್ತಿದ್ರು. ನೋಡಿ ಪ್ಯಾರ್‌ಗೇ ಆಗ್ಬುಟ್ಟೆ ಸಾ. ಥೌಸೆಂಡ್‌ ಆಫ್‌ ಜನಾ! ಅವ್ರ ಪಾರ್ಟಿಗೇ ಸೇರ್ಕೊಂಡ್ಬುಟ್ಟೆ..’

ಅದೇನ್‌, ಬಂಡೆಕುಮಾರ್‌ ಅಂತ ಹೆಸರು ಬದಲಾಯಿಸಿದ್ದಾರಾ?

‘ಅಯ್ಯೋ. ಟೀವೀಲಿ 24 ತಾಸೂ ಬಂಡೆ ಬಂಡೆ ಅಂತ ಕಿರಿಚ್‌ತವ್ರಲ್ಲಾ... ಅದೇ ಅಭ್ಯಾಸ ಆಗ್ಬುಟ್ಟದೆ..’

ಅವರದ್ದು ಈಗ ಯಾವ ಪಾರ್ಟಿ? ಏರ್‌ಪೋ
ರ್ಟಲ್ಲಿ ಜೆಡಿಎಸ್‌ ಫ್ಲ್ಯಾಗ್‌ ಹಿಡ್ಕೊಂಡಿದ್ರಂತೆ...?

‘ಬುಡಿ ಸಾರ್‌, ಕಾಂಗ್ರೆಸ್ಗೂ ಜೇಡಿಎಸ್‌ಗೂ ಯತ್ವಾಸ ಏನಿಲ್ಲ. ಫ್ಲ್ಯಾಗಲ್ಲಿ ಕಾಂಗ್ರೆಸ್‌ದು ಕೇಸರಿ ಕಲರ್‌ ಒಂದು ಹೆಚ್ಗೆ ಐತೆ! ಅಷ್ಟಕ್ಕೇ ಈ ಯುದ್ಧರಾಮಯ್ಯ ಟೀಕೆ ಮಾಡ್ಬೋದಾ..’

ಸಿದ್ರಾಮಯ್ಯ ಹೆಸರೂ ಚೇಂಜ್‌ ಮಾಡಿದ್ದೀಯಾ!

‘ಸರ್‌ ಉಮೇಶ್‌ ಬತ್ತಿ ಅವ್ರಲ್ಲಾ..’

ಥೋ.. ನಿನ್ನ. ಅದು ಉಮೇಶ್‌ ಕತ್ತಿ ಕಣಯ್ಯಾ..!

‘ಅದೇ ಸಾ.. ಅವ್ರು ಸರ್ಕಾರಕ್ಕೆ ಬತ್ತಿ ಇಡೋಕೆ ಹೊಂಟವ್ರೆ. ಎರಡೂರಪ್ಪ ಟರ್ಮ್‌ ಆದ್ಮೇಲೆ, ತಾನೇ ಸಿಎಂ ಅಂದವ್ರೆ. ನನ್‌ ಪ್ರಕಾರ ಎರಡೂರಪ್ಪ ಆದ್ಮೇಕೆ ಸಿಎಂ ಅಲ್ಲ.. ಷಿಎಂ..’

ಏನದು ಷಿಎಂ?

‘ಸೋಭಾ ಕಾಣೆಂದ್ಲಾಜೆ ಅವ್ರಲ್ಲ ಸಾ..’

ಏನಯ್ಯಾ.. ಎಲ್ರ ಹೆಸರೂ ತಪ್ಪುತಪ್ಪಾಗಿ ಹೇಳ್ತೀಯ? ಏನೋ ತಿಂಗಳಿಂದ ಶೋಭಕ್ಕ ರಾಜಕೀಯದಿಂದ ಕಣ್ಮರೆ ಆಗಿದ್ದಾರೆ ಅಂತ ಕಾಣೆಂದ್ಲಾಜೆ ಅಂತೀಯ? ಯಡಿಯೂರಪ್ಪ ಅಧಿಕಾರ ಅಷ್ಟು ಬೇಗ ಮುಗೀತದಾ?

‘ಎರಡೂರಪ್ಪ ಅವ್ರನ್ನ ಸಿಎಂ ಪೋಸ್ಟಿಂದ ಇಳಿಸೋದು ಈಸೀ ಇಲ್ಲ.. ಗೊತ್ತು ಸಾ! ಕಲ್ಯಾಣ್‌ ಕರ್ನಾಟಕ್‌ದಲ್ಲಿ ಅವ್ರಿಗೆ ಸಿಕ್ಕಾಪಟ್ಟೆ ಸಪೋರ್ಟೈತೆ..’

ಅಯ್ಯೋ!ನೀ ಹೇಳೋದು ಕಲ್ಯಾಣ್‌ ಜುವೆಲರ್ಸ್‌ ಥರಾ ಕೇಳಿಸ್ತದೆ!ರಾಜ್ಯೋತ್ಸವ
ಕ್ಕಾದ್ರೂ ಸರಿಯಾಗಿ ಕನ್ನಡ ಮಾತಾಡಯ್ಯ!

‘ಬತ್ತೀನಿ ಸಾ. ಮ್ಯಾಟ್ನಿ ಷೋಗೆ ಕನ್ನಡ್‌ ಗೊತ್ತಿಲ್ಲ ಪಿಕ್ಚರ್ದು ಎಲ್ಡ್ ಟಿಕೆಟೈತೆ.. ಓಗ್ಬೇಕು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.