ADVERTISEMENT

ಗುರುವಾರ, 11-10-1962

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಚೀಣಿ ಗಡಿ ರಕ್ಷಕರ ಮೇಲೆ
ಭಾರತೀಯ ಸೇನೆ ದಾಳಿ


ಪೀಕಿಂಗ್, ಅ. 10
- ಭಾರತೀಯ ಸೇನಾ ಪಡೆಗಳು ಇಂದು ದಕ್ಷಿಣ ಟಿಬೆಟ್‌ನ ಚೀಣಿ ಗಡಿ ಕಾವಲುಗಾರರ ಮೇಲೆ ದಾಳಿ ಮಾಡಿದುವೆಂದೂ ಹನ್ನೊಂದು ಮಂದಿ ಸಾವು ನೋವಿಗೆ ತುತ್ತಾಗಿರುವರೆಂದೂ ನವ ಚೀಣಾ ಸುದ್ದಿ ಸಂಸ್ಥೆಯ ವರದಿ ಆಪಾದಿಸಿದೆ.

ಪೊಲೀಸರ ಮೇಲೆ ಹಲ್ಲೆ
66 ಮಂದಿ ಬಂಧನ


ಚಿತ್ರದುರ್ಗ, ಅ. 10
- ಹೊಸದುರ್ಗ ತಾಲ್ಲೂಕಿನ ಅರೆಹಳ್ಳಿಯಲ್ಲಿ ಸರ್ಕಾರಿ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಗಳು ಮತ್ತು ನೌಕರರ ಮೇಲೆ ಕೈಮಾಡಿ, ಬಂಧಿಸಿ, ದಾಖಲೆಗಳನ್ನು ನಾಶಪಡಿಸಿದ ಆಪಾದನೆ ಮೇಲೆ ಅರೆಹಳ್ಳಿ ಗ್ರಾಮಸ್ಥರಾದ ಪಟೇಲ್ ನಾಗಪ್ಪ ಮತ್ತಿತರ 65 ಮಂದಿಯ ವಿರುದ್ಧ ಪೊಲೀಸರು ಮೊಕದ್ದಮೆ ಹೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.