ADVERTISEMENT

ಮಂಗಳವಾರ, 10–3–1964

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಮಂಗಳವಾರ, 10–3–1964
ಶರಾವತಿ ಯೋಜನೆ ವ್ಯವಹಾರದಲ್ಲಿ ಹಣದ ಪೋಲು: ಗಣಮುಖಿ ಟೀಕೆ
(ನಮ್ಮ ಅಸೆಂಬ್ಲಿ ಪ್ರತಿನಿಧಿಯಿಂದ)

ಬೆಂಗಳೂರು, ಮಾ. 9– ಸರಕಾರ ಹೊರಡಿಸಿರುವ ಶ್ವೇತಪತ್ರದಿಂದ ಶರಾವತಿ ಯೋಜನೆಯ ವ್ಯವಹಾರದಲ್ಲಿ ಹಣ ಪೋಲಾಗಿರುವುದು ಸರ್ವವಿದಿತವಾಗಿದೆ­ಯೆಂದು ಮಾಜಿ ಸಚಿವ ಶ್ರೀ ಅಣ್ಣಾರಾವ್ ಗಣಮುಖಿ ಅವರು ಇಂದು ವಿಧಾನಸಭೆಯಲ್ಲಿ ಟೀಕಿಸಿದರು.
ತಮ್ಮ ಬಜೆಟ್‌ ಮೇಲಿನ ಭಾಷಣ­ದಲ್ಲಿ ಶ್ವೇತಪತ್ರವೊಂದನ್ನೇ ಪ್ರಸ್ತಾಪಿಸಿದ ಮಾಜಿ ಸಚಿವರು ಟೆಂಡರುಗಳ ವ್ಯವ­ಹಾರ­ದಲ್ಲಿ ‘ಸರ್ಕಾರ ಎಲ್ಲ ಘಟ್ಟಗಳಲ್ಲೂ ತನ್ನ ಅಧಿಕಾರವನ್ನು ಚಲಾಯಿಸದೆ ಬಿಟ್ಟುಕೊಟ್ಟಿದೆ ಎಂಬುದು ಸ್ಪಷ್ಟವಾಗುವುದು’ ಎಂದು ವಿವರಿಸಿದರು.

‘ರಾಜಭವನ’ವಾಗಿ  ಕೃಮಾರಕೃಪಾ
ಬೆಂಗಳೂರು, ಮಾ. 9– ಮುಖ್ಯಮಂತ್ರಿ­ಗಳ ಅಧಿಕೃತ ನಿವಾಸ­ವಾಗಿರುವ ‘ಕುಮಾರ­ಕೃಪಾ’ ರಾಜ್ಯದ ಪ್ರಥಮ ಕಾಯಂ ರಾಜಭವನವಾಗಿ ಪರಿ­ವರ್ತನೆಗೊಳ್ಳುವುದೆಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT