ಪಾಕಿಸ್ತಾನದ ಪ್ರತಿಭಟನೆ
ನವದೆಹಲಿ, ಅ. 10- ಭಾರತದಲ್ಲಿ ಪಾಕಿಸ್ತಾನದ ಹೈಕಮೀಷನರ್ ಆಘಾ ಹಿಲಾಲಿಯವರು ವಿದೇಶಾಂಗ ಸಚಿವ ಶಾಖೆ ವಿಶೇಷ ಕಾರ್ಯದರ್ಶಿ ಶ್ರೀ ಟಿ. ಎಫ್. ಬಿ. ಎಚ್. ತ್ಯಾಬ್ಜಿಯವರನ್ನು ಇಂದು ಅಪರಾಹ್ನ ಭೇಟಿ ಮಾಡಿ, ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಗಲಭೆ ಬಗ್ಗೆ ಪಾಕ್ ಸರ್ಕಾರದ ಪ್ರತಿಭಟಣ ಪತ್ರವೊಂದನ್ನು ಸಲ್ಲಿಸಿದರು.
ಗುತ್ತಿಗೆ ಕೆಲಸದ ಪದ್ಧತಿ ರದ್ದು
ಬೆಂಗಳೂರು, ಅ. 10- ಇಂದು ಇಲ್ಲಿ ಮುಕ್ತಾಯವಾದ ಭಾರತದ ಕಾರ್ಮಿಕ ಸಮ್ಮೇಳನವು ಗುತ್ತಿಗೆ ಮೇಲೆ ಕಾರ್ಮಿಕರು ಕೆಲಸ ಮಾಡುವುದನ್ನು ರದ್ದುಗೊಳಿಸಬೇಕೆಂದು ತೀರ್ಮಾನಿಸಿತು. ಈ ನಿರ್ಧಾರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶಾಸನ ರಚನೆ ಅಗತ್ಯವಾಗಬಹುದೆಂದು ಸಮ್ಮೇಳನ ಅಭಿಪ್ರಾಯ ಪಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.