ADVERTISEMENT

ಮಂಗಳವಾರ, 16-10-1962

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಮಂಗಳವಾರ, 16-10-1962

`ನೀಫ~ ದಿಂದ ಕಾಲ್ತೆಗೆದ ಬಳಿಕವೇ ಸಂಧಾನ
ಕೊಲಂಬೊ, ಅ. 15
- `ನಾವು ಚೀಣೀಯರನ್ನು ತಡೆಗಟ್ಟದಿದ್ದರೆ ಅವರು ಇನ್ನೂ ಮುಂದೆ ಮುಂದೆ ನುಗ್ಗುತ್ತಾರೆ~ ಎಂದು ಭಾರತದ ಪ್ರಧಾನ ಮಂತ್ರಿ ಪಂಡಿತ್ ನೆಹರೂ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಗಡಿ ಪ್ರಶ್ನೆಯನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಭಾರತವು ಪ್ರಯತ್ನಿಸಿತೆಂದೂ, ಆದರೆ ಆಕ್ರಮಣ ನಡೆಸಿ, ನಂತರ ಮಾತುಕತೆ ಎಂಬುದು ಚೀಣದ ಅಭಿಪ್ರಾಯವಾಗಿದೆಯೆಂದು ನೆಹರೂ ತಿಳಿಸಿದರು.

ಉಪಕುಲಪತಿ ಸ್ಥಾನಕ್ಕೆ ಸರ್ದಾರ್ ಪಣಿಕ್ಕರ್
ಬೆಂಗಳೂರು, ಅ. 15
- ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಬೇಕೆಂದು, ರಾಜ್ಯ ಸರ್ಕಾರವು ದೇಶದ ಪ್ರಸಿದ್ಧ ವಿದ್ವಾಂಸರಲ್ಲೊಬ್ಬರಾದ ಸರ್ದಾರ್ ಕೆ. ಎಂ. ಪಣಿಕ್ಕರ್ ಅವರನ್ನು ಕೇಳಿಕೊಂಡಿದೆಯೆಂದು ಇಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.