ಬೆಂಗಳೂರು, ಮಾ. 17 – ರಾಷ್ಟ್ರೀಕೃತ ಬಸ್ ಮಾರ್ಗಗಳಲ್ಲಿ, ಖಾಸಗಿಯವರಿಗೂ ಬಸ್ಗಳನ್ನು ಓಡಿಸಲು ಅವಕಾಶ ಕೊಡಬೇಕೆಂದು ವಿರೋಧ ಪಕ್ಷದ ನಾಯಕ ಶ್ರೀ ಎಸ್. ಶಿವಪ್ಪನವರು ಇಂದು ವಿಧಾನ ಸಭೆಯಲ್ಲಿ ಮಾಡಿದ ಸೂಚನೆಯನ್ನು ಸಾರಿಗೆ ಸಚಿವ ಶ್ರೀ ಡಿ. ದೇವರಾಜ್ ಅರಸ್ ಅವರು ತಿರಸ್ಕರಿಸಿದರು.
ಭಾರತಕ್ಕೆ ಬ್ರಿಟನ್ನಿನಿಂದ ಮತ್ತೆ 16.7 ಕೋಟಿ ರೂ. ಸಾಲ: 3 ಒಪ್ಪಂದಗಳಿಗೆ ದೆಹಲಿಯಲ್ಲಿ ಸಹಿ
ನವದೆಹಲಿ, ಮಾ. 17 – ಬ್ರಿಟನ್ ಸರ್ಕಾರವು ಭಾರತ ಸರ್ಕಾರಕ್ಕೆ ಒಟ್ಟು ಒಂದು ಕೋಟಿ 25 ಲಕ್ಷ ಪೌಂಡುಗಳನ್ನು (16.7 ಕೋಟಿ ರೂಪಾಯಿಗಳು) ಸಾಲವಾಗಿ ನೀಡುವ ಮೂರು ಒಪ್ಪಂದಗ-ಳಿಗೆ ಇಂದು ಇಲ್ಲಿ ಸಹಿ ಹಾಕಲಾಯಿತು.