ಸೋವಿಯತ್ ನಿಲುವಿನಲ್ಲಿ ಗಮನಾರ್ಹ ಪ್ರಗತಿಯಿಲ್ಲ
ವಾಷಿಂಗ್ಟನ್, ಜ. 19 - ಬರ್ಲಿನ್ ವಿಷಯದಲ್ಲಿ ಸೋವಿಯತ್ ಒಕ್ಕೂಟದ ನಿಲುವಿನಲ್ಲಿ ಗಮನಾರ್ಹವಾದ ಕಾಠಿಣ್ಯವಿರದಿದ್ದರೂ ಪ್ರಗತಿಯೂ ಕಂಡು ಬಂದಿಲ್ಲವೆಂದು ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಡೀನ್ರಸ್ಕ್ ಅವರು ನಿನ್ನೆ ಇಲ್ಲಿ ತಿಳಿಸಿದರು.
`ರಾಷ್ಟ್ರಾದ್ಯಂತ ಸಣ್ಣ ಕೈಗಾರಿಕೆ ಸ್ಥಾಪಿತವಾಗಲಿ~
ಬೆಂಗಳೂರು, ಜ. 19 - `ಸಣ್ಣ ಕೈಗಾರಿಕೆಗಳಲ್ಲಿ ಅಪಾರ ವಿಶ್ವಾಸವಿರುವ~ ಕೇಂದ್ರದ ಕೈಗಾರಿಕೆ ಮತ್ತು ವಾಣಿಜ್ಯ ಶಾಖೆ ಸಚಿವ ಶ್ರೀ ಕೆ. ಸಿ. ರೆಡ್ಡಿ ಅವರು ಭಾರಿ ಪ್ರಮಾಣದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ಇಂದು ಇಲ್ಲಿ ಭಾರತದ ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.