ADVERTISEMENT

ಶುಕ್ರವಾರ, 7-10-1961

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ರಾಜ್ಯ ಮಹಿಳೆಯರ ಸಮಾವೇಶ
ಬೆಂಗಳೂರು, ಅ. 6
- ರಾಜ್ಯದ ಮಹಿಳೆಯರ ಪರವಾಗಿ ಇಂದು ಇಲ್ಲಿ ಸಮಾವೇಶಗೊಂಡ ಮಹಿಳೆಯರ ಪ್ರಾತಿನಿಧಿಕ ಸಮ್ಮೇಳನ ತೃತೀಯ ಪಂಚವಾರ್ಷಿಕ ಯೋಜನೆಯ ಸಂದೇಶವನ್ನು ಜನತೆಗೆ ಸಾರಲು ಪಣತೊಟ್ಟಿತು.

ನಗರ ಭವನದಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ತೃತೀಯ ಯೋಜನೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿದರು.

ಸಮಗ್ರತೆಯ ರಕ್ಷಣೆ
ನವದೆಹಲಿ, ಅ. 6
- ತನ್ನ ಸಮಸ್ಯೆಯನ್ನು ರಕ್ಷಿಸಿಕೊಳ್ಳಲೋಸುಗ ಭಾರತವು ಶಸ್ತ್ರಸಜ್ಜಿತ ರಾಷ್ಟ್ರವಾಗಲು ಸಿದ್ಧವಾಗಿರಬೇಕೆಂದು ಕಲ್ಕತ್ತ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಡಾ. ಎಸ್. ಎನ್. ಬ್ಯಾನರ್ಜಿಯವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT