ADVERTISEMENT

ಸೋಮವಾರ, 2–12–1963

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ರಾಷ್ಟ್ರಪತಿಯಿಂದ ನಾಗಾಲ್ಯಾಂಡ್ ಉದ್ಘಾಟನೆ
ಕೊಹಿಮಾ, ಡಿ. 1– ಭಾರತ ಗಣರಾಜ್ಯದಲ್ಲಿ ಹದಿನಾರನೇ ರಾಜ್ಯವಾಗಿ ಅವತರಿಸುತ್ತಿರುವ ನಾಗಾಲ್ಯಾಂಡ್‌ ರಾಜ್ಯದ ಉದ್ಘಾಟನೆ ಇಂದು ಇಲ್ಲಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರವರಿಂದ ನೆರವೇರಿತು. ವರ್ಣರಂಜಿತ ಉಡುಪು ಧರಿಸಿದ ನಾಗಾ ಪುರುಷರು, ಮಹಿಳೆಯರು, ಮಕ್ಕಳು, ಸುಮಾರು ಹತ್ತು ಸಹಸ್ರಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಭಾರತದ ಮತ್ತೊಂದು ರಾಕೆಟ್‌ ಪ್ರಯೋಗ
ಜೈಪುರ, ಡಿ. 1– ಅಂತರಿಕ್ಷದ ಶಾಂತಿಯುತ ಸಂಶೋಧನೆಗಾಗಿ ಭಾರತವು ಮತ್ತೊಂದು ರಾಕೆಟ್‌ ಅನ್ನು ಜನವರಿಯಲ್ಲಿ ಪ್ರಯೋಗಿಸಬ­ಹುದೆಂದು ಭಾರತದ ಅಂತರಿಕ್ಷ ಸಂಶೋಧನಾ ಸಮಿತಿಯ ಅಧ್ಯಕ್ಷ ಡಾ. ವಿಕ್ರಂ ಸಾರ ಭಾಯ್‌ ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.