ADVERTISEMENT

25 ವರ್ಷಗಳ ಹಿಂದೆ: ಭಾನುವಾರ 16.6.1996

25 ವರ್ಷಗಳ ಹಿಂದೆ ಭಾನುವಾರ 16.6.1996

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 19:31 IST
Last Updated 15 ಜೂನ್ 2021, 19:31 IST
   

ಹೆಗಡೆ ಉಚ್ಚಾಟನೆಗೆ ರಾಜಕೀಯ ವ್ಯವಹಾರ ಸಮಿತಿ ಅಸ್ತು

ನವದೆಹಲಿ, ಜೂನ್ 15– ರಾಮಕೃಷ್ಣ ಹೆಗಡೆ ಅವರನ್ನು ಜನತಾದಳದ
ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾದ ದಳದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ಕ್ರಮವನ್ನು ಇಂದು ಸಂಜೆ ನಡೆದ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯು ಅನುಮೋದನೆ ಮಾಡಿತು.
ಈ ಬೆಳವಣಿಗೆಯಿಂದಾಗಿ ದಳದ
ಜತೆಗಿನ ಹೆಗಡೆ ಅವರ ಸಂಬಂಧಕ್ಕೆ
ತೆರೆಬಿದ್ದಂತಾಯಿತು.

5 ವರ್ಷದ ಹಿಂದೆ ಗೌಡರು ಎಲ್ಲಿದ್ದರು?–ಹೆಗಡೆ

ADVERTISEMENT

ಬೆಂಗಳೂರು, ಜೂನ್ 15– ‘ಕಳೆದ 5 ವರ್ಷ ದಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪ’ದ ಮೇಲೆ ಜನತಾ ದಳದಿಂದ ಉಚ್ಚಾಟನೆಗೊಂಡಿರುವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ‘ಈ 5 ವರ್ಷದ ಹಿಂದೆ ಪ್ರಧಾನಿ ಎಚ್‌.ಡಿ. ದೇವೇಗೌಡ, ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಎಲ್ಲಿ ಇದ್ದರು ಮತ್ತು ಎಲ್ಲಿ
ಕುಳಿತು ಪಕ್ಷ ವಿರೋಧಿ ಚಟುವಟಿಕೆಗಳನ್ನು ಗಮನಿಸುತ್ತಿದ್ದರು’ ಎಂದು ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಗಿ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.