ರೈಲಿನಲ್ಲಿ ಬಾಂಬ್ ಸ್ಫೋಟ 40 ಸೈನಿಕರ ಸಾವು
ಗುವಾಹಟಿ, ಫೆ. 25 (ಯುಎನ್ಐ, ಪಿಟಿಐ)– ಅಸ್ಸಾಂನ ಲುಮ್ಡಿಂಗ್ ಸಮೀಪದ ನಿಲೊಂಗ್ ರೈಲು ನಿಲ್ದಾಣದೊಳಗೆ ಇಂದು ಬೆಳಗಿನ ಜಾವ ಬ್ರಹ್ಮಪುತ್ರಾ ಮೇಲ್ ರೈಲಿನ ದ್ವಿತೀಯ ದರ್ಜೆ ಬೋಗಿಯಲ್ಲಿ ಎರಡು ಪ್ರಬಲ ಬಾಂಬ್ ಸ್ಫೋಟಿಸಿ ಸೇನೆ ಮತ್ತು ಕೇಂದ್ರೀಯ ಮೀಸಲು ಪಡೆಯ 26 ಯೋಧರು ಸತ್ತು ಸುಮಾರು 25 ಮಂದಿ ಗಾಯಗೊಂಡರು. ಆದರೆ ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 40.
ಬೆಳಗಿನ ಜಾವ ಐದು ಗಂಟೆಗೆ ಒಂದಾದ ಮೇಲೊಂದು ಬಾಂಬ್ ಸ್ಫೋಟಿಸಿದ ಕೂಡಲೇ ಎಂಜಿನ್ಗೆ ಹತ್ತಿರವಿದ್ದ ರಕ್ಷಣಾ ಪಡೆಯವರು ತುಂಬಿದ್ದ ಬೋಗಿ ಚೂರು ಚೂರಾಯಿತು. ಬಾಂಬ್ ಸ್ಫೋಟದ ನಂತರ ಹೊತ್ತಿಕೊಂಡ ಬೆಂಕಿಯಲ್ಲಿ ಬೋಗಿ ಪೂರ್ಣ ಉರಿದುಹೋಯಿತು.
ಮಣಿಪುರ– ಕಾಂಗೈ ಸರ್ಕಾರ ಅಸ್ತಿತ್ವಕ್ಕೆ
ಇಂಫಾಲ್, ಫೆ. 25 (ಪಿಟಿಐ)– ರಿಷಾಂಗ್ ಕೀಷಿಂಗ್ ನೇತೃತ್ವದ ಮೂವರು ಸದಸ್ಯರ ಸಚಿವ ಸಂಪುಟ ಇಂದು ಪ್ರಮಾಣ ವಚನ ಸ್ವೀಕರಿಸುವುದರೊಡನೆ ಮಣಿಪುರದ ರಾಜಕೀಯ ಸಂದಿಗ್ಧತೆ ಅಂತ್ಯಗೊಂಡಿತು.
ಚುನಾವಣೆಯಲ್ಲಿ ಕಾಂಗೈ ಪಕ್ಷ ಅತಿ ದೊಡ್ಡ ಏಕೈಕ ಪಕ್ಷವಾಗಿ ಮೂಡಿರುವುದರಿಂದ ತಾವು ಆ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾಗಿ ರಾಜ್ಯಪಾಲ ಒ.ಎನ್.ಶ್ರೀವಾತ್ಸವ ಅವರು ಪತ್ರಕರ್ತರಿಗೆ ತಿಳಿಸಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.