ADVERTISEMENT

ಸೋಮವಾರ, 10–10–1994

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 19:32 IST
Last Updated 9 ಅಕ್ಟೋಬರ್ 2019, 19:32 IST

ಸತ್ತವರು ಒಟ್ಟು 23; ಪ್ರಸಾರವಾಗದ ಉರ್ದು ವಾರ್ತೆ, ಹಿಂಸಾಚಾರ

ಬೆಂಗಳೂರು, ಅ. 9– ನಗರದಲ್ಲಿ ಮೂರು ದೇಹಗಳು ಪತ್ತೆ ಹಾಗೂ ಹಲ್ಲೆ ಇರಿತದಿಂದ ಗಾಯಗೊಂಡಿದ್ದ ಇಬ್ಬರು ಮೃತಪಡುವುದ ರೊಂದಿಗೆ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾದ ಉರ್ದು ವಾರ್ತೆ ವಿರುದ್ಧ ಪ್ರತಿಭಟಿಸಿ ಕಳೆದ ಮೂರು ದಿನದಿಂದ ನಡೆದ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 23ಕ್ಕೆ ಏರಿದೆ. ಕೆಲವೆಡೆ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗುಂಡು ಹಾರಿಸ ಬೇಕಾಯಿತು.

ವ್ಯಾಪಕ ಪ್ರತಿಭಟನೆ, ಹಿಂಸಾಚಾರದ ಹಿನ್ನೆಲೆಯಲ್ಲಿ ಬೆಂಗಳೂರು ದೂರದರ್ಶನ ಕೇಂದ್ರ ಇಂದು ರಾತ್ರಿ 7.45ರ ಉರ್ದು ವಾರ್ತೆಯನ್ನು ಹಿಂತೆಗೆದುಕೊಂಡಿತು.

ADVERTISEMENT

ಉರ್ದು ವಾರ್ತೆ ಬೇಡ: ರಾಜ್

ಬೆಂಗಳೂರು, ಅ. 9– ‘ಬೆಂಗಳೂರು ದೂರದರ್ಶನದಿಂದ ಉರ್ದು ವಾರ್ತಾ ಪ‍್ರಸಾರದ ವೇಳೆಯನ್ನು ಪುನರ್ ನಿಗದಿಗೊಳಿಸುತ್ತೇವೆ ಎಂದು ಹೇಳಿರುವುದು ಗೊಂದಲಕ್ಕೆಡೆ ಮಾಡಿದೆ’ ಎಂದು ವರನಟ ಡಾ. ರಾಜ್‌ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

‘ಯಾವ ಕಾರಣಕ್ಕೂ ಯಾವುದೇ ಕಾಲದಲ್ಲೂ ಉರ್ದು ವಾರ್ತೆಗಳನ್ನು ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿತ್ತರಿಸಲಾಗದು. ಈ ಕೇಂದ್ರ ಕನ್ನಡ ಭಾಷೆಗಾಗಿಯೇ ಮೀಸಲಾಗಿರಬೇಕು’ ಎಂದು ಕನ್ನಡ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಡಾ. ರಾಜ್‌ಕುಮಾರ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಕೆ.ಸಿ.ಎನ್. ಚಂದ್ರು, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಸಿ.ವಿ.ಎಲ್. ಶಾಸ್ತ್ರಿ, ನಿರ್ದೇಶಕರ ಸಂಘದ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ (ಬಾಬು) ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.