ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಲೋಕಶಕ್ತಿ ಜತೆ ಬಿಜೆಪಿ ಮೈತ್ರಿ: ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 19:45 IST
Last Updated 5 ಜನವರಿ 2023, 19:45 IST
   

ಲೋಕಶಕ್ತಿ ಜತೆ ಬಿಜೆಪಿ ಮೈತ್ರಿ: ಅಡ್ವಾಣಿ

ಬೆಂಗಳೂರು, ಜನವರಿ 5– ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದ ಲೋಕಶಕ್ತಿಯು ತಮ್ಮ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಬಿಜೆಪಿ ಅಧ್ಯಕ್ಷ ಎಲ್‌.ಕೆ. ಅಡ್ವಾಣಿ ಇಂದು ಇಲ್ಲಿ ಪ್ರಕಟಿಸಿದರು.

‘ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಲೋಕಶಕ್ತಿ ಕೈಗೊಂಡಿ
ರುವ ತೀರ್ಮಾನದ ಬಗ್ಗೆ ನನಗೆ ತಿಳಿಸ
ಲಾಗಿದೆ. ಸ್ಥಾನ ಹಂಚಿಕೆ ಮಾಡಿಕೊಳ್ಳುವ ಕುರಿತು ಆ ಪಕ್ಷದ ಪ್ರಮುಖರೊಡನೆ
ರಾಜ್ಯ ಬಿಜೆಪಿ ಮುಖಂಡರು ಸದ್ಯದಲ್ಲೇ ಮಾತುಕತೆ ನಡೆಸುವರು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಅಂಚೆ ನೌಕರರ ಮುಷ್ಕರ:
ಸೇವೆ ಅಸ್ತವ್ಯಸ್ತ

ನವದೆಹಲಿ, ಜನವರಿ 5 (ಪಿಟಿಐ)– ವೇತನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ಅಂಚೆ ಇಲಾಖೆಯ ಸಿಬ್ಬಂದಿ ಇಂದು ದೇಶದಾದ್ಯಂತ ಒಂದು ದಿನದ ಮುಷ್ಕರ ನಡೆಸಿದ ಕಾರಣ ಅಂಚೆ ಸೇವೆಯಲ್ಲಿ
ಅಸ್ತವ್ಯಸ್ತವಾಯಿತು.

ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆಯ ಕಾರ್ಯವನ್ನು ನಿರ್ವಹಿಸುವ ಇಲಾಖೇತರ ಸಿಬ್ಬಂದಿಗೆ ನ್ಯಾಯಮೂರ್ತಿ ತಲ್ವಾರ್‌ ಸಮಿತಿ ಮಾಡಿರುವ ಶಿಫಾರಸ್ಸನ್ನು ಜಾರಿಗೊಳಿಸಬೇಕೆಂದು ಅಂಚೆ ಸಂಸ್ಥೆಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.