ADVERTISEMENT

25 ವರ್ಷಗಳ ಹಿಂದೆ | ಪರ್ಯಾಯ ಸರ್ಕಾರ: ವಿವರಕ್ಕೆ ರಾಷ್ಟ್ರಪತಿ ಸೂಚನೆ

ಗುರುವಾರ 22, ಏಪ್ರಿಲ್‌ 1999

ಪ್ರಜಾವಾಣಿ ವಿಶೇಷ
Published 21 ಏಪ್ರಿಲ್ 2024, 19:35 IST
Last Updated 21 ಏಪ್ರಿಲ್ 2024, 19:35 IST
   

ಪರ್ಯಾಯ ಸರ್ಕಾರ: ವಿವರಕ್ಕೆ ರಾಷ್ಟ್ರಪತಿ ಸೂಚನೆ

ನವದೆಹಲಿ, ಏ. 21 (ಪಿಟಿಐ): ಪರ್ಯಾಯ ಸರ್ಕಾರ ರಚನೆಯ ಬಗ್ಗೆ ವಿವರ ನೀಡುವಂತೆ ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರು ಇಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೇಳಿದ್ದಾರೆ.

***

ADVERTISEMENT

ಮರುಜನ್ಮ ಪಡೆಯುತ್ತಿರುವ 3 ಕೆರೆಗಳು

ಬೆಂಗಳೂರು, ಏ. 21– ಜಲಮಾಲಿನ್ಯದಿಂದ ಕಲುಷಿತಗೊಂಡಿರುವ ನಗರದ ಮೂರು ಕೆರೆಗಳು ಸದ್ಯದಲ್ಲೇ ಮರುಜನ್ಮ ಪಡೆದು ಸ್ವಚ್ಛತೆಯ ತಾಣಗಳಾಗಿ ಕಂಗೊಳಿಸಲಿವೆ.

ಇಂಡೊ–ನಾರ್ವೆ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆ ಈಗಾಗಲೇ ಕೈಗೆತ್ತಿಕೊಂಡಿರುವ ಕೆರೆಗಳ ಸ್ವಚ್ಛತೆ ಕಾಮಗಾರಿಯಿಂದ ಹೆಬ್ಬಾಳ, ಮಡಿವಾಳ ಹಾಗೂ ಅಗರಂ ಕೆರೆಗಳು ಕೆಲವೇ ದಿನಗಳಲ್ಲಿ ಶುದ್ಧ ನೀರನ್ನು ಹೊಂದಲಿವೆ. ಅಷ್ಟೇ ಅಲ್ಲದೆ, ಪ್ರವಾಸಿಗರನ್ನು ಆಕರ್ಷಿಸುವ ಹಲವು ಚಟುವಟಿಕೆಗಳನ್ನು ಒಳಗೊಂಡ ಸುಂದರ ತಾಣಗಳಾಗಿ ಪರಿವರ್ತನೆಯನ್ನು ಕಾಣ‌ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.