ಭಾರತ–ಪಾಕ್ ರಾಜತಾಂತ್ರಿಕರ ಉಚ್ಚಾಟನೆ
ಇಸ್ಲಾಮಾಬಾದ್, ಅ. 3 (ಪಿಟಿಐ)–ಭಾರತ ಮತ್ತು ಪಾಕಿಸ್ತಾನಗಳು ಈ ವಾರದ ಆರಂಭದಲ್ಲಿ ಪರಸ್ಪರ ಎಂಬಂತೆ ತಮ್ಮ ದೇಶಗಳಿಂದ ಒಬ್ಬೊಬ್ಬ ರಾಜತಾಂತ್ರಿಕ ರನ್ನು ಉಚ್ಚಾಟಿಸಿವೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಎನ್ಐಎ ಸುದ್ದಿಸಂಸ್ಥೆ ತಿಳಿಸಿದೆ.
ಭಾರತವು ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರನ್ನು ಬೇಹುಗಾರಿಕೆ ಆಪಾದನೆಯ ಮೇಲೆ ಮಂಗಳವಾರ ಉಚ್ಚಾಟಿಸಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ರಾಯಭಾರಿ ಕಚೇರಿಯ ಉನ್ನತ ಅಧಿಕಾರಿ ಎ.ಬಿ.ಶುಕ್ಲಾ ಅವರನ್ನು ಬುಧವಾರ ಉಚ್ಚಾಟಿಸಿದೆ ಎಂದು ಸುದ್ದಿ ಸಂಸ್ಥೆ
ವರದಿ ಮಾಡಿದೆ.
ಮಳೆ ಹಾನಿ: ಪರಿಹಾರಕ್ಕೆ ಮೊರೆ
ಬೆಂಗಳೂರು: ಅ. 3– ಈ ವರ್ಷ ಮುಂಗಾರು ಪ್ರಾರಂಭವಾದಾಗಿನಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಆಗಿರುವ ಸಾವು ನೋವು, ಆಸ್ತಿಪಾಸ್ತಿಗಳಿಗೆ ಆಗಿರುವ ನಷ್ಟದ ಬಗ್ಗೆ ವಿವರವಾದ ವರದಿಯನ್ನು 15 ದಿನಗಳಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿ ಪರಿಹಾರ ಕೇಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.