ADVERTISEMENT

25 ವರ್ಷಗಳ ಹಿಂದೆ | ಬಾವಿಗೆ ಬಸ್ ಬಿದ್ದು 50 ಜನರ ಸಾವು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 23:30 IST
Last Updated 26 ಆಗಸ್ಟ್ 2024, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಹರಪನಹಳ್ಳಿ, ಆ. 26– ಇಲ್ಲಿಗೆ ಸಮೀಪದ ಉಚ್ಚಂಗಿದುರ್ಗದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್‌ವೊಂದು ರಸ್ತೆ ಪಕ್ಕದ ಬಾವಿಯಲ್ಲಿ ಮುಳುಗಿ 50ಕ್ಕೂ ಹೆಚ್ಚು ಮಂದಿ ಜಲಸಮಾಧಿ ಆಗಿರಬಹುದೆಂದು ಶಂಕಿಸಲಾಗಿದೆ.

ದಾವಣಗೆರೆ ಜಿಲ್ಲೆ ಹರಪನಹಳ್ಳಿಯಿಂದ 30 ಕಿ.ಮೀ. ದೂರದ ಉಚ್ಚಂಗಿದುರ್ಗದಲ್ಲಿರುವ ನೂರು ಚದರಡಿ ವಿಸ್ತೀರ್ಣದ ‘ಅರಿಸಿನ ಬಾವಿ’ಯಲ್ಲಿ ಈ ಬಸ್ ಮುಳುಗಿದೆ. ಬಸ್ಸಿನ ಮೇಲೆ ಸುಮಾರು ಏಳು ಅಡಿಯಷ್ಟು ನೀರಿದ್ದು ರಕ್ಷಣಾ ಕಾರ್ಯಕ್ಕೆ ಹೊಂಡದ ಗಲೀಜು ನೀರಿನಿಂದ ತೊಂದರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT